BengaluruCrime

ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?

ಬೆಂಗಳೂರು; ಮೈತುಂಬಾ ಸಾಲ ಮಾಡಿಕೊಂಡಿರುವುದಲ್ಲದೆ, ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನ ವರ್ತನೆ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ಆಂಧ್ರಹಳ್ಳಿಯ ಗಂಡನ ಮನೆಯಲ್ಲಿ ಮಾನಸ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಗಂಡನ ಮನೆಯಲ್ಲಿದ್ದರೂ ಆಕೆಯನ್ನು ಉಳಿಸುವ ಪ್ರಯತ್ನ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ..

ಇದನ್ನೂ ಓದಿ; ನಾಳೆ ದೆಹಲಿಗೆ ಹೊರಡಲಿರುವ ಸಿಎಂ, ಡಿಸಿಎಂ; ಸಂಪುಟಕ್ಕೆ ಸರ್ಜರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!

ಈ ಬಗ್ಗೆ ಮಾನಸ ತಂದೆ ಮಾತನಾಡಿದ್ದು, ಆರು ವರ್ಷಗಳ ಹಿಂದೆ ದಿಲೀಪ್‌ಗೆ ನನ್ನ ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಐದು ವರ್ಷದ ಹೆಣ್ಣು ಮಗು ಕೂಡಾ ಇದೆ.. ಅಳಿಯ ದಿಲೀಲ್‌ ಕೆಲಸ ಬಿಟ್ಟಿದ್ದ, ಸಾಲದೆಂಬಂತೆ ವಿಪರೀತ ಸಾಲ ಮಾಡಿಕೊಂಡಿದ್ದ.. ಜೊತೆಗೆ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ.. ಆ ಮಹಿಳೆ ಬಂದು ನನ್ನ ಮಗಳಿಗೆ ಹಣಕ್ಕಾಗಿ ಪೀಡಿಸುತ್ತಿದ್ದಳು ಎಂದು ಆರೋಪ ಮಾಡಿದ್ದಾರೆ. ನಾಣು ಬಂದು ನೋಡಿದಾಗ ಮಗಳು ನೇಣುಬಿಗಿದುಕೊಂಡಿದ್ದ ಕಾಲುಗಳು ನೇತಾಡುತ್ತಿದ್ದವು.. ಕೆಳಗಿಳಿಸಿ ಕಾಲುಗಳನ್ನು ಉಜ್ಜಿದೆ.. ಆದ್ರೆ ಆಗಲೇ ಪ್ರಾಣ ಬಿಟ್ಟಿದ್ದಳು ಎಂದು ಮಾನಸ ತಂದೆ ಗೋಳು ತೋಡಿಕೊಂಡಿದ್ದಾರೆ.
ಸಾಲ ತೀರಿಸಲು ತವರು ಮನೆಯಿಂದ ಹಣ ತರುವಂತೆ ಗಂಡ ಪೀಡಿಸುತ್ತಿದ್ದಾನೆ ಎಂದು ಮಗಳ ಕೆಲ ದಿನಗಳ ಹಿಂದೆ ಹೇಳಿದ್ದಳು ಎಂದು ಮಾನಸ ತಂದೆ ಕಣ್ಣೀರಾಕಿದ್ದಾರೆ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

Share Post