CrimeDistrictsPolitics

ವಿಜಯಪುರದ ಬಳಿ ಸುಮಾರು 3 ಕೋಟಿ ರೂ. ನಗದು ವಶ; ಎಲ್ಲಿಗೆ ಹೋಗುತ್ತಿತ್ತು ಗೊತ್ತಾ..?

ವಿಜಯಪುರ; ಕಳೆದ ರಾತ್ರಿ ಮಂಡ್ಯದ ಮದ್ದೂರು ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.. ಇದೀಗ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಬೃಹತ್‌ ಕಾರ್ಯಾಚರಣೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಭಾರೀ ಪ್ರಮಾಣ ನಗದು ವಶಪಡಿಸಿಕೊಳ್ಳಲಾಗಿದೆ. 

ಇದನ್ನೂ ಓದಿ; ಯಾರು ರಾಜ..?; ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಸಂಸದ ಪ್ರತಾಪ ಸಿಂಹ!

ಕಾರಿನಲ್ಲಿ 2 ಕೋಟಿ 94 ಲಕ್ಷ ರೂ. ಪತ್ತೆ;

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಎಲ್ಲಾ ಕಡೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ.. ಇಂದು ವಿಜಯಪುರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.. ಟಯೋಟಾ ಕಾರೊಂದು ತಡೆದು ಪರಿಶೀಲನೆ ನಡೆಸಿದಾಗ ಭಾರಿ ಪ್ರಮಾಣದ ನಗದು ಹಣ ಸಿಕ್ಕಿದೆ..  ಟೊಯೋಟಾ ಕಾರಿನಲ್ಲಿ ಬರೋಬ್ಬರಿ 2 ಕೋಟಿ 93 ಲಕ್ಷ 50 ಸಾವಿರ ರೂಪಾಯಿ ನಗದನ್ನು ಸಾಗಾಣೆ ಮಾಡಲಾಗುತ್ತಿತ್ತು.  ಸಿಂದಗಿ ಬೈಪಾಸ್ ಬಳಿಯ ಚೆಕ್ ಪೋಸ್ಟ್ ಬಳಿ ಕಾರನ್ನು ತಡೆದು ಪರಿಶೀಲನೆ ಮಾಡಲಾಗಿದೆ.. ಈ ವೇಳೆ ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ; ಮುರಿದುಬೀಳುತ್ತಾ ಬಿಜೆಪಿ-ಜೆಡಿಎಸ್‌ ದೋಸ್ತಿ..?; ಕುಮಾರಸ್ವಾಮಿಗೆ ಇಷ್ಟು ಅಸಮಾಧಾನ ಯಾಕೆ..?

ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಈ ಹಣ ರವಾನೆ;

ಈ ಹಣ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ರವಾನೆಯಾಗುತ್ತಿತ್ತು.. ಟಯೋಟಾ ಕಾರಿನಲ್ಲಿ 500 ರೂಪಾಯಿ ಮುಖಬೆಲೆಯ 2 ಕೋಟಿ 93 ಲಕ್ಷ 50 ಸಾವಿರ ರೂಪಾಯಿ ನಗದು ತರಲಾಗುತ್ತಿತ್ತು.. ಇಷ್ಟು ಪ್ರಮಾಣದ ಹಣ ಯಾಕೆ ತರುತ್ತಿದ್ದರು..? ಯಾರಿಗೆ ಕೊಡಲು ತರುತ್ತಿದ್ದರು ಅನ್ನೋದು ತನಿಖೆಯಿಂದ ಗೊತ್ತಾಗಲಿದೆ.. ಚುನಾವಣೆಯಲ್ಲಿ ಹಂಚಲು ಈ ಹಣ ತರುತ್ತಿರಬಹುದು ಎಂದು ಶಂಕಿಸಲಾಗಿದೆ..

ಇದನ್ನೂ ಓದಿ; ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿಚಾರ; ನಗರತ್‌ ಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

ಇಬ್ಬರನ್ನು ಬಂಧಿಸಿರುವ ಪೊಲೀಸರು!;

ಪೊಲೀಸರು ಟೋಯೋಟಾ ಕಾರು, 2 ಕೋಟಿ 93 ಲಕ್ಷ ನಗದು ಹಾಗೂ ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ. ಕಾರಿನಲ್ಲಿದ್ದ ಬಾಲಾಜಿ ನಿಕ್ಕಂ, ಸಚಿನ್‌ ಮೋಯಿತೆ ಎಂಬುವವರನ್ನು ಬಂಧಿಸಲಾಗಿದೆ. ಹಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಗೋಳಗುಮ್ಮಟ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದು ಮಂಡ್ಯ ಜಿಲ್ಲೆ ಮದ್ದೂರು ಸುದ್ದಿ;

ಮಂಡ್ಯ; ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.. ಹೀಗಾಗಿ ಎಲ್ಲೆಡೆ ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದ್ದು, ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.. ಹೀಗಿರುವಾಗಲೇ ಮಂಡ್ಯ ಬಳಿ ಕಾರೊಂದರಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ..

ಇದನ್ನೂ ಓದಿ; ಕಾಂಗ್ರೆಸ್‌ ಎರಡನೇ ಪಟ್ಟಿಗಾಗಿ ಸರ್ಕಸ್‌; ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

ಕಾರಿನಲ್ಲಿ ನಗದು ಸಾಗಾಟ;

ಮಂಡ್ಯ ಜಿಲ್ಲೆ ಮದ್ದೂರು ಬಳಿ ನಿಡಘಟ್ಟ ಚೆಕ್‌ಪೋಸ್ಟ್‌ ಬಳಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.. ಈ ವೇಳೆ ಬಂದ KA 54 N 4030 ಸಂಖ್ಯೆಯ ಕ್ರೇಟಾ ಕಾರಿನಲ್ಲಿ ಕೂಡಾ ಪರಿಶೀಲನೆ ಮಾಡಲಾಗಿದೆ.. ಈ ವೇಳೆ ಈ ಕಾರಿನಲ್ಲಿ ಹಲವು ಕವರ್‌ಗಳು ಪತ್ತೆಯಾಗಿದ್ದು, ಇದರಲ್ಲಿ ಬರೋಬ್ಬರಿ 99 ಲಕ್ಷದ 20 ಸಾವಿರ ರೂಪಾಯಿ ಸಿಕ್ಕಿದೆ.. ಇದಕ್ಕೆ ಸೂಕ್ತ ದಾಖಲೆ ಒದಗಿಸದ ಕಾರಣ ಕಾರು ಸಮೇತ ಹಣವನ್ನು ವಶಪಡಿಸಿಕೊಳ್ಳಲಾಗಿದೆ..

ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿಯೇ ಫಿಕ್ಸ್‌; ಅಖಾಡಕ್ಕೆ ರೆಡಿ ಅಂತಿದ್ದಾರೆ ಮಾಜಿ ಸಿಎಂ!

ಚುನಾವಣಾಧಿಕಾರಿಗಳು ಹದ್ದಿನ ಕಣ್ಣು;

ನೀತಿ ಸಂಹಿತೆ ಜಾರಿಯಾದ ದಿನದಿಂದ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.. ಕಾರುಗಳು, ಇತರೆ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸುತ್ತಿದ್ದಾರೆ… ಈ ವೇಳೆ ರಾಜ್ಯದ ಅಲ್ಲಲ್ಲಿ ಈಗಾಗಲೇ ದಾಖಲೆ ಇಲ್ಲದ ಹಣ ಸಿಕ್ಕಿದೆ… ಆದ್ರೆ ಮಂಡ್ಯದ ಮದ್ದೂರು ಬಳಿ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಸಿಕ್ಕಿದೆ… ಇದುವರೆಗೆ ಸಿಕ್ಕ ಹಣದಲ್ಲಿ ಇದೇ ದೊಡ್ಡ ಮೊತ್ತ.. ಆದ್ರೆ ಈ ಹಣವನ್ನು ಯಾಕೆ ಸಾಗಿಸುತ್ತಿದ್ದರು..? ಎಲ್ಲಿಗೆ ಸಾಗಿಸುತ್ತಿದ್ದರು..? ಅನ್ನೋದು ಗೊತ್ತಿಲ್ಲ… ಇದು ಚುನಾವಣಾ ಅಕ್ರಮಕ್ಕೆ ಬಳಸಲಾಗುತ್ತಿದ್ದ ಹಣವೇ..? ಅಥವಾ ಬೇರೆ ಯಾವ ಹಣ..? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ..

ಇದನ್ನೂ ಓದಿ; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

ಅಡಿಕೆ ವ್ಯಾಪಾರಿಗೆ ಸೇರಿದ ನಗದು ಎಂಬ ಮಾಹಿತಿ;

ಮಾಹಿತಿ ಪ್ರಕಾರ ಈ ಹಣ ಕೆಆರ್‌ ಪೇಟೆ ಮೂಲದ ಅಡಿಕೆ ವ್ಯಾಪಾರಿಗೆ ಸೇರಿದ ಹಣ ಎಂದು ಹೇಳಲಾಗುತ್ತಿದೆ.. ಅಡಿಕೆ ವ್ಯಾಪಾರದ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.. ಅಂದಹಾಗೆ, ಕೋಟಿ ಲೆಕ್ಕದಲ್ಲಿ ನಗದು ರೂಪದಲ್ಲಿ ವ್ಯವಹಾರ ಮಾಡುವುದು ಕಾನೂನು ಪ್ರಕಾರ ತಪ್ಪು.. ಜೊತೆಗೆ ಅಡಿಕೆ ವ್ಯಾಪಾರದಿಂದ ಬಂದ ಹಣ ಎಂಬುದಕ್ಕೆ ಕಾರಿನಲ್ಲಿದ್ದವರು ಸೂಕ್ತ ದಾಖಲೆ ಕೂಡಾ ಒದಗಿಸಿಲ್ಲ.. ಹೀಗಾಗಿ ಆ ಹಣವನ್ನು ಜಪ್ತಿ ಮಾಡಲಾಗಿದೆ.. ಸೂಕ್ತ ದಾಖಲೆ ಒದಗಿಸಿದರೆ ಅದನ್ನು ವಾಪಸ್‌ ಕೊಡಲಾಗುತ್ತದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?

ಚುನಾವಣೆ ಮುಗಿಯುವವರೆಗೂ ತೀವ್ರ ತಪಾಸಣೆ;

ದೇಶದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19 ಹಾಗೂ ಮೇ 7 ರಂದು ಚುನಾವಣೆ ನಡೆಯಲಿದೆ. ಇದು ಮುಗಿದು ಜೂನ್‌ 4 ರಂದು ಮತ ಎಣಿಕೆ ನಡೆಯುವವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.. ಹೀಗಾಗಿ ಈ ವೇಳೆ ಹೆಚ್ಚಿನ ನಗದು ಸಾಗಾಟದ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿರುತ್ತಾರೆ.. ವ್ಯಾಪಾರ, ವ್ಯವಹಾರಕ್ಕೆ ಹಣ ಬಳಸುವುದಾದರೆ ಆನ್‌ಲೈನ್‌ ಮೂಲಕ ಬಳಕೆ ಮಾಡುವುದು ಒಳ್ಳೆಯದು.. ಆಗ ಸರ್ಕಾರಕ್ಕೂ ಲೆಕ್ಕ ಸಿಗುತ್ತದೆ..

 

ಇದನ್ನೂ ಓದಿ; ಮಾಜಿ ಸಿಎಂಗೆ ಕಾಂಗ್ರೆಸ್‌ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!

 

 

Share Post