Cinema

ಜಪಾನ್‌ನಲ್ಲಿದ್ದ ರಾಜಮೌಳಿ ಕುಟುಂಬಕ್ಕೆ ಭೂಕಂಪನದ ಅನುಭನ; ಬೆಚ್ಚಿಬಿದ್ದ ಕುಟುಂಬ!

ಬಾಹುಬಳಿ ಖ್ಯಾತಿಯ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ದೊಡ್ಡ ಪ್ರಮಾದದಿಂದ ಪಾರಾಗಿದ್ದಾರೆ. ಇತ್ತೀಚೆಗಷ್ಟೇ ರಾಜಮೌಳಿ ತಮ್ಮ ಕುಟುಂಬ ಸಮೇತ ಆರ್‌ಆರ್‌ಆರ್ ಸಿನಿಮಾದ ಪ್ರದರ್ಶನಕ್ಕಾಗಿ ಜಪಾನ್‌ಗೆ ತೆರಳಿದ್ದರು. ರಾಜಮೌಳಿ ಕುಟುಂಬ ಜಪಾನ್‌ನ ಹೋಟೆಲ್‌ ಒಂದರ 28ನೇ ಮಹಡಿಯಲ್ಲಿ ತಂಗಿದ್ದರು. ಇದೇ ವೇಳೆ ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ. ಹಠಾತ್ ಭೂಕಂಪನದಿಂದಾಗಿ ಎಲ್ಲರೂ ಭಯಭೀತರಾಗಿದ್ದರು. ಕುಟೂಂಬದವರೆಲ್ಲಾ ಭಯದಿಂದ ನಡುಗುತ್ತಿದ್ದರು ಎಂದು ರಾಜಮೌಳಿ ಪುತ್ರ ಕಾರ್ತಿಕೇಯ ಹೇಳಿದ್ದಾರೆ.

ಇದನ್ನೂ ಓದಿ; ಕುಮಾರಸ್ವಾಮಿ ಶಸ್ತ್ರಚಿಕಿತ್ಸೆ ಯಶಸ್ವಿ; ವಿಶ್ರಾಂತಿಯ ನಂತರ ಚುನಾವಣಾ ಪ್ರಚಾರ

ದಿಢೀರ್‌ ಭೂಕಂಪನದಿಂದ ಭೀತಿ ಉಂಟಾಗಿತ್ತು;

ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಎಲ್ಲರೂ ಭಯಭೀತರಾಗಿದ್ದಾರೆ ಎಂದು ರಾಜಮೌಳಿ ಅವರ ಪುತ್ರ ಎಸ್‌ಎಸ್ ಕಾರ್ತಿಕೇಯ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಇಡೀ ಕುಟುಂಬ ಜಪಾನ್‌ನ ಬೃಹತ್ ಕಟ್ಟಡದ 28 ನೇ ಮಹಡಿಯಲ್ಲಿದೆ ಎಂದು ಕಾರ್ತಿಕೇಯ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.. ಇದ್ದಕ್ಕಿದ್ದಂತೆ ಕಟ್ಟಡವು ಚಲಿಸುತ್ತಿರುವಂತೆ ಕಂಡುಬಂತು. ಎಲ್ಲಿ ಕಟ್ಟಡ ನೆಲಸಮವಾಗುತ್ತೋ ಎಂಬ ಭೀತಿ ಉಂಟಾಗಿತ್ತು ಎಂದು ಕಾರ್ತಿಕೇಯ ಹೇಳಿದ್ದಾರೆ.

ಇದನ್ನೂ ಓದಿ; ನಮ್ಮ ಬಳಿ ಜಾಹೀರಾತು ನೀಡಲೂ ಹಣವಿಲ್ಲ, ರೈಲು ಟಿಕೆಟ್‌ ಬುಕ್‌ ಮಾಡಲೂ ಆಗ್ತಿಲ್ಲ; ರಾಹುಲ್‌ ಗಾಂಧಿ!

ರಾಜಮೌಳಿ ಅಭಿಮಾನಿಗಳಲ್ಲಿ ಹೆಚ್ಚಾದ ಅತಂಕ;

ಇದರಿಂದ ರಾಜಮೌಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಎಷ್ಟು ದೊಡ್ಡ ಯಶಸ್ಸು ಕಂಡಿದೆ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ರಾಮ್ ಚರಣ್ ಮತ್ತು ಎನ್‌ಟಿಆರ್‌ ಅಭಿನಯದ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಯಿತು. ಅಲ್ಲದೇ ವಿದೇಶದಲ್ಲಿಯೂ ಈ ಸಿನಿಮಾ ದಾಖಲೆ ನಿರ್ಮಿಸಿದೆ. ಅದರಲ್ಲೂ ಜಪಾನ್ ನಲ್ಲಿ ಈ ಸಿನಿಮಾ ದಾಖಲೆ ನಿರ್ಮಿಸಿದೆ. ಈ ಚಿತ್ರದಲ್ಲಿನ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಗೊತ್ತೇ ಇದೆ.. ಅಷ್ಟೇ ಅಲ್ಲ RRR ಚಿತ್ರ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ಇದನ್ನೂ ಓದಿ; ಬಿಜೆಪಿ ಪಕ್ಷದ ಶುದ್ಧೀಕರಣವೇ ನನ್ನ ಗುರಿ; ಕಾಂಗ್ರೆಸ್‌ ಸೇರಲ್ಲ ಎಂದ ಸದಾನಂದಗೌಡ!

ರಾಜಮೌಳಿ ಪುತ್ರ ಕಾರ್ತಿಕೇಯ ಟ್ವೀಟ್‌ನಲ್ಲೇನಿದೆ..?

Felt a freaking earthquake in Japan just now!!! Was on the 28th floor and slowly the ground started to move and took us a while to realise it was an earthquake. I was just about to panic but all the Japanese around did not budge as if it just started to rain!!  Experience an earthquake box ticked. 

ಇದನ್ನೂ ಓದಿ; ಮೇಕೆದಾಟು ಅಣೆಕಟ್ಟು ಮಾಡಲು ಬಿಡಲ್ಲ ಎಂದ ಡಿಎಂಕೆ; ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ಸಮರ!

Share Post