Sports

ಆರ್‌ಸಿಬಿಗೆ ಅಳಿವು-ಉಳಿವಿನ ಪ್ರಶ್ನೆ; ಸನ್‌ರೈಸರ್ಸ್‌ ವಿರುದ್ಧ ಗೆಲ್ಲುತ್ತಾ ಬೆಂಗಳೂರು ತಂಡ..?

ಬೆಂಗಳೂರು; ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ಆರ್‌ಸಿಬಿ ಪಂದ್ಯ ಇದೆ.. ಈಗಾಗಲೇ ಆರ್‌ಸಿಬಿ ತಂಡ ಐದು ಪಂದ್ಯಗಳನ್ನು ಸೋತು ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ.. ಇಂದು ಸನ್‌ ರೈಸರ್ಸ್‌ ವಿರುದ್ಧ ಆರ್‌ಸಿಬಿ ಕಾದಾಡಲಿದೆ.. ಇದು ಆರ್‌ಸಿಬಿ ಅಳಿವುಉಳಿವಿನ ಪ್ರಶ್ನೆ.. ಹೀಗಾಗಿ ತೀವ್ರ ಕುತೂಹಲ ಶುರುವಾಗಿದೆ.. ಆರ್‌ಸಿಬಿಗೆ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ..

ಇದನ್ನೂ ಓದಿ; ಫೀಲ್ಡಿಂಗ್‌ ವೇಳೆ ಜಾರಿತು ಪ್ಯಾಂಟ್‌; ಮುಜುಗರಕ್ಕೊಳಗಾದ ರೋಹಿತ್‌ ಶರ್ಮಾ!

ಸೋತರೆ ಮನೆಗೆ ಹೋಗಲಿರುವ ಆರ್‌ಸಿಬಿ;

ಇವತ್ತು ಆರ್‌ಸಿಬಿ ಗೆಲ್ಲಲೇಬೇಕಿದೆ.. ಗೆದ್ದರೆ ಮಾತ್ರ ಪ್ಲೇ ಆಫ್‌ ಕನಸು ಜೀವಂತವಾಗಿ ಇಟ್ಟುಕೊಳ್ಳಬಹುದು.. ಸೋತರೆ ಮನೆಗೆ ಹೋಗುವುದು ಅನಿವಾರ್ಯ.. ಹೀಗಾಗಿ ಹೈದರಾಬಾದ್‌ ಸನ್‌ ರೈಸರ್ಸ್‌ ವಿರುದ್ಧ ಆರ್‌ಸಿಬಿ ಸೆಣಸಾಡಬೇಕಿದೆ.. ಕನ್ನಡಿಗರು ಈಗಲೂ ಕೂಡಾ ಆರ್‌ಸಿಬಿ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ.. ಇಷ್ಟು ಬಾರಿ ಸೋತರೂ ಕೂಡಾ ಆರ್‌ಸಿಬಿ ಗೆಲ್ಲಬೇಕೆಂಬ ಪ್ರಾರ್ಥನೆ ಮಾಡುತ್ತಿದ್ದಾರೆ. ಹೈದರಾಬಾದ್‌ ತಂಡ ಐದು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಗೆದ್ದಿದೆ.. ಆದ್ರೆ ಆರ್‌ಸಿಬಿ ಇಇದುವರೆ ಆಡಿದ ಆರು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಪಂದ್ಯ ಮಾತ್ರ.

ಇದನ್ನೂ ಓದಿ; ಜಲಮಂಡಳಿ ತೋಡಿದ ಗುಂಡಿಗೆ ಯುವಕ ಬಲಿ; ಇಬ್ಬರು ಗಂಭೀರ

ನಾಲ್ಕನೇ ಸ್ಥಾನದಲ್ಲಿರುವ ಹೈದರಾಬಾದ್‌ ತಂಡ;

ಕಾವ್ಯಾ ಮಾರನ್​ ಒಡೆತನದ ಹೈದರಾಬಾದ್​ ತಂಡ ಪಾಯಿಂಟ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಯಾಕಂದ್ರೆ ಈ ತಂಡ ಆಡಿದ ಐದು ಮಂದ್ಯಗಳಲ್ಲಿ ಎರಡು ಒಂದ್ಯಗಳನ್ನು ಸೋತಿದೆ.. ಇನ್ನು ಆರು ಪಂದ್ಯಗಳಲ್ಲಿ ಐದು ಒಂದ್ಯ ಸೋತಿರುವ ಆರ್‌ಸಿಬಿ ತಂಡ ಕೊನೆಯ ಸ್ಥಾನದಲ್ಲಿದೆ..

 

ಇದನ್ನೂ ಓದಿ; ಭೀಕರ ಅಪಘಾತದಿಂದ ಬೆಂಕಿ; ಕಾರಿನಲ್ಲೇ ಮಕ್ಕಳು ಸೇರಿ 7 ಮಂದಿ ಸಜೀವದಹನ!

 

Share Post