Sports

Vijay Hazare Trophy : ಶಾರೂಖ್‌ ಸಿಡಿಲಬ್ಬರದ ಬ್ಯಾಟಿಂಗ್

Vijay Hazare Trophy ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕದಲ್ಲಿ ಪಾಲಿಗೆ ಶಾರೂಖ್‌ ಖಾನ್‌ ಸಿಂಹಸ್ವಪ್ನವಾಗಿದ್ದಾರೆ. 39 ಎಸೆತಗಳಲ್ಲಿ 79 ರನ್‌ ಭಾರಿಸುವ ಮೂಲಕ ಕರ್ನಾಟಕ ತಂಡಕ್ಕೆ ಶಾರೂಖ್ ಕಂಟಕವಾಗಿದ್ದಾರೆ. ‌ಶಾರೂಖ್‌ ಅವರ 79ರ ನೆರವಿನಿಂದ ತಮಿಳುನಾಡು 350ರ ಗಡಿ ದಾಟಿದೆ.

ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್​ ಪಂದ್ಯದಲ್ಲೂ ಕರ್ನಾಟಕ ಪಾಲಿಗೆ ಶಾರೂಖ್ ಖಾನ್ ಮುಳುವಾಗಿದ್ದರು. ಅಂದು ಕೇವಲ 15 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಶಾರೂಖ್ ಖಾನ್ ತಮಿಳುನಾಡು ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು.

ಮುಂದಿನ IPL 2022 ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಶಾರೂಖ್‌ ಅವರ ಮೇಲೆ ಎಲ್ಲರ ಕಣ್ಣು ಬೀಳಲಿದೆ. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿರುವ ಶಾರೂಖ್‌ ಅವರನ್ನು ಖರೀದಿಸಲು ಬಾರಿ ಪೈಪೋಟಿಯಂತು ಕಂಡು ಬರಲಿದೆ.

Vijay Hazare Trophy

Share Post