CrimeNational

ಭೀಕರ ಅಪಘಾತದಿಂದ ಬೆಂಕಿ; ಕಾರಿನಲ್ಲೇ ಮಕ್ಕಳು ಸೇರಿ 7 ಮಂದಿ ಸಜೀವದಹನ!

ಜೈಪುರ; ರಾಜಸ್ಥಾನದ ಸಿಕಾರ್‌ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದುರಂತದಲ್ಲಿ ಮಕ್ಕಳು ಸೇರಿ ಏಳು ಮಂದಿ ಸಜೀವದಹನವಾಗಿದ್ದಾರೆ. ಕಾರು ಹಾಗೂ ಟ್ರಕ್‌ ನಡುವೆ ಅಪಘಾತ ನಡೆದಿದ್ದು, ಅನಂತರ ಕಾರಿಗೆ ಬೆಂಕಿ ಹೊತ್ತಿಕೊಂಡು ಈ ದುರಂತಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟರಾ ದೇವೇಗೌಡರು..?

ಸಿಕಾರ್‌ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.. ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.. ಇದಾದ ಮೇಲೆ ಕಾರಿಗೆ ಬೆಂಕಿಹೊತ್ತಿಕೊಂಡಿದೆ.. ಈ ವೇಳೆ ಕಾರಿನ ಬಾಗಿಲು ತೆಗೆಯಲು ಕೂಡಾ ಆಗಿಲ್ಲ. ಇದರಿಂದಾಗಿ ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿ ಒಟ್ಟು ಏಳು ಮಂದಿ ಸಜೀವದಹನವಾಗಿದ್ದಾರೆ.

 

Share Post