CrimeDistricts

ಮದುವೆ ಮುರಿದುಬಿದ್ದಿದ್ದಕ್ಕೆ ಗಾಂಜಾ ಅಸ್ತ್ರ ಪ್ರಯೋಗಿಸಿದ ಎಂಜಿನಿಯರ್‌!

ಶಿವಮೊಗ್ಗ; ಮದುವೆ ಮುರಿದುಬಿದ್ದಿದ್ದರಿಂದ ಹೆಣ್ಣಿನ ಕಡೆಯವರನ್ನು ಗಾಂಜಾ ಕೇಸ್‌ನಲ್ಲಿ ಸಿಕ್ಕಿಹಾಕಿಸಲು ಹೋಗಿ ವ್ಯಕ್ತಿಯೊಬ್ಬ ತಾನೇ ಕಾನೂನು ಸುಳಿಗೆ ಸಿಲುಕಿದ್ದಾನೆ.. ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. ಸರ್ಕಾರಿ ನೌಕರನಾಗಿರುವ ಶಾಂತಕುಮಾರ್‌ ಎಂಬ ಎಂಜಿನಿಯರ್‌ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾನೆ..

ಇದನ್ನೂ ಓದಿ; ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

ಶಾಂತಕುಮಾರ್‌ ಎಂಜಿನಿಯರ್‌ ಆಗಿದ್ದ ಜಿತೇಂದ್ರ ಎಂಬುವವರ ಮನೆಯಲ್ಲಿ ಹೆಣ್ಣು ನೋಡಿದ್ದ.. ಮದುವೆ ನಿಶ್ಚಯವಾಗುವ ಹಂತಕ್ಕೆ ಬಂದಿತ್ತು.. ಆದ್ರೆ ಇದೇ ವೇಳೆ ಮದುವೆ ಮುರಿದುಬಿದ್ದಿದೆ.. ಇದರಿಂದಾಗಿ ಶಾಂತಕುಮಾರ್‌ ಆಕ್ರೋಶಗೊಂಡಿದ್ದು, ಹೆಣ್ಣುನ ಮನೆಯವರನ್ನು ಗಾಂಜಾ ಕೇಸ್‌ನಲ್ಲಿ ಸಿಕ್ಕಿ ಹಾಕಿಸಲು ಪ್ರಯತ್ನಿಸಿದ್ದಾರೆ.. ಇದಕ್ಕಾಗಿ ಆತ ಗಾಂಜಾ ಪಾಕೆಟ್‌ಗಳನ್ನು ಖರೀದಿಸಿ ತಂದಿದ್ದು, ಹುಡುಗಿಯ ಮನೆಯ ಹಿಂದಿನ ಆವರಣದಲ್ಲೊಇ ಎಸೆದುಹೋಗಿದ್ದಾನೆ.. ಅನಂತರ ಶಾಂತಕುಮಾರನೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಜೀತೇಂದ್ರ ಮನೆಯಲ್ಲಿ ಗಾಂಜಾ ಇದೆ ಎಂದು ಹೇಳಿದ್ದಾನೆ..

ಇದನ್ನೂ ಓದಿ; ಟೆಕ್ಕಿ ಯುವತಿ ಮೇಲೆ ದೇವಸ್ಥಾನವೊಂದರ ಪೂಜಾರಿಯಿಂದ ಅತ್ಯಾಚಾರ!

ಹೀಗಾಗಿ ಅಬಕಾರಿ ಅಧಿಕಾರಿಗಳು ಅಲ್ಲಿಗೆ ಹೋಗಿ ಹುಡುಕಾಟ ನಡೆಸಿದಾಗ ಏನೂ ಸಿಕ್ಕಿರಲಿಲ್ಲ.. ಆದ್ರೆ ಮಾರನೆಯ ದಿನ ಮನೆಯವರು ಮನೆಯ ಹಿಂಬದಿ ಆವರಣದಲ್ಲಿ ಸ್ವಚ್ಛಗೊಳಿಸುವಾಗ ಗಾಂಜಾ ಪಾಕೆಟ್‌ಗಳು ಸಿಕ್ಕಿವೆ.. ಸಿಸಿಟಿವಿ ಪರಿಶೀಲನೆ ಮಾಡಿದಾಗ ಶಾಂತಕುಮಾರ್‌ನೇ ಅಲ್ಲಿ ಬಿಸಾಕಿರುವುದು ಗೊತ್ತಾಗಿದೆ.. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..

Share Post