BengaluruCrime

ಟೆಕ್ಕಿ ಯುವತಿ ಮೇಲೆ ದೇವಸ್ಥಾನವೊಂದರ ಪೂಜಾರಿಯಿಂದ ಅತ್ಯಾಚಾರ!

ಬೆಂಗಳೂರು; ದೇವಸ್ಥಾನವೊಂದರ ಪೂಜಾರಿಯೊಬ್ಬ ದೋಷ ಪರಿಹಾರ ಮಾಡುತ್ತೇನೆ ಎಂದು ಹೇಳಿ 26 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗೊಲ್ಲರಹಳ್ಳಿ ಪುರದಮ್ಮ ದೇವಾಲಯದ ಅರ್ಚಕ ದಯಾನಂದ ಎಂಬಾತನೇ ಅತ್ಯಾಚಾರ ಎಸಗಿರುವ ಆರೋಪಿ ಎದುರಿಸುತ್ತಿರುವ ಆರೋಪಿ. ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ದಯಾನಂದನನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ..

ಇದನ್ನೂ ಓದಿ; ಚೀನಾದಲ್ಲಿ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌!; HUGಗೆ 11 ರೂಪಾಯಿ, KISSಗೆ 110 ರೂಪಾಯಿ!

ಪ್ರಮುಖ ಕಂಪನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಯುವತಿ ಅರಸೀಕೆರೆ ಮೂಲದವಳೇ ಆಗಿದ್ದು, ಬೆಂಗಳೂರಿನ ಬಾಗಲಗುಂಟೆಯಲ್ಲಿ ನೆಲೆಸಿದ್ದಾಳೆ.. ಈಕೆ ಏಪ್ರಿಲ್‌ ನಲ್ಲಿ ದಯಾನಂದನ ಬಳಿ ಶಾಸ್ತ್ರ ಕೇಳಲು ಸ್ನೇಹಿತೆಯರ ಜೊತೆ ಹೋಗಿದ್ದಳು.. ಈ ವೇಳೆ ದಯಾನಂದ ಪರಿಚಯವಾಗಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಭೂಕುಸಿತಗಳು ಏಕೆ ಸಂಭವಿಸುತ್ತವೆ..?; ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ..?

ಇದಾದ ಮೇಲೆ ಜುಲೈ 6ರಂದು ಆರೋಪಿ ದಯಾನಂದ್‌ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾನೆ.. ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿಕೊಂಡು ಆಕೆಯನ್ನು ಉಪ್ಪಾರಪೇಟೆ ಬಳಿಯ ಲಾಡ್ಜ್‌ ಒಂದಕ್ಕೆ ಕರೆಸಿಕೊಂಡಿದ್ದಾರೆ.. ಅಲ್ಲಿ ಮಂಕುಬೂದಿ ಎರಚಿ ಅತ್ಯಾಚಾರ ಎಸಗಿದ್ದಾನೆ.. ಇದೇ ವೇಳೆ ಖಾಸಗಿ ಕ್ಷಣಗಳ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದಾನೆ.. ಅನಂತರ ಅವುಗಳನ್ನು ಸಂತ್ರಸ್ತೆಗೆ ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಿ 1.20 ಲಕ್ಷ ರೂಪಾಯಿ ಪಡೆದಿದ್ದಾನೆ.. ಜೊತೆಗೆ ಮದುವೆಯಾಗುವಂತೆ ಪೀಡಿಸಿರುವ ಆರೋಪಿ, ಮದುವೆಯಾಗದಿದ್ದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.. ಜೊತೆಗೆ ವಶೀಕರಣ ತಂತ್ರ ಪ್ರಯೋಗ ಮಾಡಿರಬಹುದು ಎಂದೂ ಶಂಕಿಸಲಾಗಿದೆ..

Share Post