CrimeNationalPolitics

ಆಂಧ್ರದಲ್ಲಿ ನಡುರಸ್ತೆಯಲ್ಲೇ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿ!

ಗುಂಟೂರು (ಆಂಧ್ರಪ್ರದೇಶ); ಆಂಧ್ರಪ್ರದೇಶದಲ್ಲಿ ಗ್ಯಾಂಗ್‌ ವಾರ್‌ಗಳು, ಕೊಲೆಗಳು ಕಾಮನ್‌.. ಅದ್ರಲ್ಲೂ ರಾಜಕೀಯ ದ್ವೇಷಕ್ಕಾಗಿ ಇಲ್ಲಿ ಏನು ಬೇಕಾದರೂ ಮಾಡುತ್ತಾರೆ.. ಇದೇ ರಾಜಕೀಯ ಕಾರಣಕ್ಕೆ ಆಂಧ್ರದ ಗುಂಟೂರು ಬಳಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಕಾರ್ಯಕರ್ತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.. ನಡು ರಸ್ತೆಯಲ್ಲೇ ಶೇಖ್‌ ರಶೀದ್‌ ಎಂಬ ಯುವಕನನ್ನು ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾನೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ದೇಶಾದ್ಯಂತ ಆಕ್ರೋಶಗಳ ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ಮಹಿಳೆಯರ ಹೆಸರಿನಲ್ಲಿ ಹೂಡಿಕೆ ಮಾಡೋದಕ್ಕೆ ಇದಕ್ಕಿಂತ ಉತ್ತಮ ಯೋಜನೆ ಇಲ್ಲ!

ಪಲ್ನಾಡು ಜಿಲ್ಲೆಯ ವಿನುಕೊಂಡದಲ್ಲಿ ಕಳೆದ ರಾತ್ರಿ ಈ ಕೃತ್ಯ ಎಸಗಲಾಗಿದೆ.. ಬುಧವಾರ ರಾತ್ರಿ 8.30ರ ಸುಮಾರಿಗೆ ಮಂಡ್ಲಮುಡಿ ಬಸ್‌ ನಿಲ್ದಾಣದ ಬಳಿ ಶೇಖ್‌ ರಶೀದ್‌ ನಿಂತುಕೊಂಡಿದ್ದ.. ಈ ವೇಳೆ ಜಿಲಾನಿ ಎಂಬಾಂತ ಮಚ್ಚಿನಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ.. ಅಲ್ಲಿ ಜನಸಂದಣಿ ಇತ್ತು.. ವಾಹನಗಳೂ ಓಡಾಡುತ್ತಿದ್ದವು.. ಆದರೂ ಯಾರೂ ನೆರವಿಗೆ ಬಂದಿಲ್ಲ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಕೊಲೆಯಾದ ಯುವಕ ವೈಎಸ್‌ಆರ್‌ಪಿ ಕಾರ್ಯಕರ್ತನಾಗಿದ್ದು, ರಾಜಕೀಯ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಘಟನೆಯನ್ನು ವೈಎಸ್‌ಆರ್‌ಸಿಪಿ ನಾಯಕ ಹಾಗೂ ಮಾಜಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಖಂಡಿಸಿದ್ದಾರೆ..

Share Post