BengaluruPolitics

ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು!; ಸ್ಪೀಕರ್‌ರಿಂದ ಪರಿಶೀಲನೆ!

ಬೆಂಗಳೂರು; ವಿಧಾನಸೌಧದ ಕಟ್ಟಡ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು.. ಇದನ್ನು ನೋಡಲೆಂದೇ ಜನರು ಬರುತ್ತಾರೆ.. ರಾಜ್ಯದ ಆಡಳಿತ ಶಕ್ತಿ ಕೇಂದ್ರವಾಗಿರುವ ವಿಧಾನಸೌಧ ಕಟ್ಟಡವನ್ನು ಕಲ್ಲುಗಳಿಂದ ಅತ್ಯಂತ ಸದೃಢವಾಗಿ ಕಟ್ಟಲಾಗಿದೆ.. ಆದ್ರೆ ಈ ಕಟ್ಟಡದ ಪೂರ್ವ ದಿಕ್ಕಿನಲ್ಲಿರುವ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದೆ..

ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!

ವಿಧಾನಸೌಧ ಕಟ್ಟಡದಲ್ಲಿ ಹಲವು ಗುಮ್ಮಟಗಳ ನಿರ್ಮಾಣ ಮಾಡಲಾಗಿದೆ.. ಇದರಲ್ಲಿ ಪೂರ್ವ ದಿಕ್ಕಿಗಿರುವ ಒಂದು ಗುಮ್ಮಟದಲ್ಲಿ ಬಿರುಕು ಕಂಡಿದೆ.. ಈ ವಿಚಾರ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ಗೊತ್ತಾಗಿ ಅವರು ಪರಿಶೀಲನೆ ಮಾಡಿದರು.. ಇದು ಡಿಪಿಆರ್‌ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ.. ಗುಮ್ಮಟ ಬಿರುಕು ಬಿಟ್ಟಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರುತ್ತೇನೆ.. ಸರಿಪಡಿಸಲು ಹೇಳುತ್ತೇನೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ..

ಇದನ್ನೂ ಓದಿ; ಬಂದೂಕಿನಿಂದ ಪತ್ನಿಯನ್ನು ಗುಂಡಿಕ್ಕಿ ಕೊಂದ ವಿರಾಜಪೇಟೆಯ ವ್ಯಕ್ತಿ!

Share Post