CrimeDistricts

ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಹಾಸನ; ಎರಡು ದಿನಗಳ ಹಿಂದಷ್ಟೇ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಗುಡ್ಡು ಕುಸಿದು ಏಳು ಮಂದಿ ಸಾವನ್ನಪ್ಪಿದ್ದರು.. ಇನ್ನೂ ಆ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.. ಹೀಗಿರುವಾಗಲೇ ಹಾಸನ ಜಿಲ್ಲೆಯಲ್ಲಿ ಮತ್ತೊಂದು ಗುಡ್ಡ ಕುಸಿತ ಪ್ರಕರಣ ನಡೆದಿದೆ..

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಓಮ್ನಿ ವಾಹನ ಮೇಲೆ ಗುಡ್ಡ ಕುಸಿದಿದ್ದು, ಇಡೀ ವಾಹನ ಸಂಪೂರ್ಣ ಮಣ್ಣಿನಲ್ಲಿ ಮುಚ್ಚಿದೆ.. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಎತ್ತಿನಹಳ್ಳ ಬಳಿ ಈ ದುರ್ಘಟನೆ ನಡೆದಿದೆ.. ಈ ಭಾಗದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಣ್ಣು ಸಡಿಲವಾಗಿ ರಸ್ತೆ ಪಕ್ಕದ ಗುಡ್ಡಗಳು ರಸ್ತೆಗೆ ಕುಸಿದುಬೀಳುತ್ತಿವೆ.. ಇದರಿಂದಾಗಿ ದುರಂತಗಳು ನಡೆಯುತ್ತಿವೆ..

ಇದನ್ನೂ ಓದಿ; ಹಬ್ಬ-ಹರಿದಿನಗಳಲ್ಲಿ ಉಪವಾಸ ಮಾಡಿದರೆ ಕ್ಯಾನ್ಸರ್‌ ನಮ್ಮತ್ತ ಸುಳಿಯೋದಿಲ್ಲ..!

ಮಣ್ಣು ಕುಸಿದಿದ್ದರಿಂದ ಓಮ್ನಿ ವಾಹನ ಸಂಪೂರ್ಣ ಜಖಂಗೊಂಡಿದೆ.. ವಾಹನದ ಬಹುತೇಕ ಭಾಗ ಮಣ್ಣಿನಡಿ ಸಿಲುಕಿದೆ.. KA-17 M 5003 ನಂಬರ್‌ನ ವಾಹನ ಇದಾಗಿದ್ದು, ವಾಹನದಲ್ಲಿದ್ದವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ನಡೆದಿಲ್ಲ ಎಂದು ತಿಳಿದುಬಂದಿದೆ..

Share Post