CrimeDistricts

ಪರ ಪುರುಷನ ಜೊತೆ ಎಸ್ಕೇಪ್‌ ಆದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ!

ತುಮಕೂರು; ಆಕೆ 18 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು.. ಆಕೆಗೀಗ ಇಬ್ಬರು ಹೆಣ್ಣು ಮಕ್ಕಳು ಕೂಡಾ ಇದ್ದಾರೆ.. ಆದ್ರೆ ಈಗ ಬೇರೆಯವನ ಮೇಲೆ ಪ್ರೀತಿ ಚಿಗುರಿ ಆತನ ಜೊತೆ ಓಡಿಹೋಗಿದ್ದಾಳೆ.. ಈ ವಿಷಯ ತಿಳಿದ ಗಂಡ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ತುಮಕೂರು ಬಳಿಯ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ದೇವರಾಜ್‌ ಎಂಬುವವರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು.

ಇದನ್ನೂ ಓದಿ; 30 ವರ್ಷ ವಯಸ್ಸಿನ ನಂತರ ಮದುವೆಯಾದರೆ ಇಷ್ಟೆಲ್ಲಾ ಆಗುತ್ತಾ..?

ಹೊಸಹಳ್ಳಿಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ದೇವರಾಜ್‌ ಅವರು ಮಾಧವಿ ಎಂಬಾಕೆಯನ್ನು ಪ್ರೀತಿಸಿ 18 ವರ್ಷಗಳ ಹಿಂದೆ ಮದುವೆಯಾಗಿದ್ದರು.. ಇವರಿಗೆ ಈಗ 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಆದ್ರೆ ಅಂಗಡಿಗೆ ಬರುತ್ತಿದ್ದ ಅದೇ ಊರಿನ ಆನಂದ್‌ ಕುಮಾರ್‌ ಎಂಬ ಗ್ರಾಹಕ, ಮಾಧುವೆ ಜೊತೆ ಸಲುಗೆ ಬೆಳೆಸಿದ್ದಾನೆ.. ಆಕೆಗೆ ಮಾಯ ಮಾತುಗಳನ್ನು ಹೇಳಿ ಮಾಧವಿಯನ್ನು ಕರೆದುಕೊಂಡು ಹೋಗಿದ್ದಾನೆ.. ಇದರಿಂದ ಮನನೊಂದ ಪತಿ ದೇವರಾಜ್‌ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ..

ಇದನ್ನೂ ಓದಿ; ಗೊತ್ತಿಲ್ಲದ ವಿಷದ ಹಣ್ಣು ತಿಂದು ಹಿರಿಯೂರಿನ 6 ಮಕ್ಕಳು ಅಸ್ವಸ್ಥ!

ಇನ್ನು ದೇವರಾಜ್‌ ಅವರು ಡೆತ್‌ನೋಟ್‌ ಬರೆದಿಟ್ಟಿದ್ದು, ಆನಂದ್‌ ಕುಮಾರ್‌ ನನಗೆ ಜೀವ ಬೆದರಿಕೆ ಹಾಕಿದ್ದ ಎಂದು ಆರೋಪ ಮಾಡಿದ್ದಾರೆ.. ಜೊತೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಪೊಲೀಸರು ನನಗೆ ನ್ಯಾಯ ಕೊಡಬೇಕೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.. ಇತ್ತ ದೇವರಾಜ್‌ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಆನಂದ್‌ ಕುಮಾರ್‌ ಹಾಗೂ ಮಾಧವಿ ತಲೆಮರೆಸಿಕೊಂಡಿದ್ದಾರೆ.. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ; ರೀಲ್ಸ್‌ ಮಾಡುವಾಗ ದುರಂತ; 300 ಅಡಿ ಫಾಲ್ಸ್‌ಗೆ ಬಿದ್ದು ಯುವತಿ ಸಾವು!

Share Post