PoliticsUncategorized

21 ಮೇಕೆ, 21 ಕುರಿ, ಮೂರು ಎಮ್ಮೆ ಬಲಿ!; ಸಿಎಂ, ಡಿಸಿಎಂ ವಿರುದ್ಧ ನಡೆಯಿತಾ ಶತ್ರು ಭೈರವಿ ಯಾಗ?

ಬೆಂಗಳೂರು; ಕೇರಳದ ರಾಜರಾಜೇಶ್ವರಿ ದೇಗುಲದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆಯಂತೆ..! ಹೀಗಂತ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಆರೋಪ ಮಾಡಿದ್ದಾರೆ.. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಮ್ಮ ಸರ್ಕಾರವನ್ನು ನಾಶ ಮಾಡಲು ಈ ಯಾಗ ಮಾಡಿಸುತ್ತಿದ್ದು, ಯಾರು ಮಾಡಿಸುತ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.. 

ಅಘೋರಿಗಳ ಮೂಲಕ ನಮ್ಮ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪೂಜೆ, ಯಾಗ ಮಾಡಲಾಗುತ್ತಿದೆ.. ಇದಕ್ಕಾಗಿ 21 ಮೇಕೆ, 21 ಕುರಿ, ಮೂರು ಎಮ್ಮೆ ಬಲಿ ಕೊಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ..   ಯಾವ ಪೂಜೆ ಮಾಡ್ತಿದ್ದಾರೆ..? ಯಾರು ಈ ಯಾಗವನ್ನು ಮಾಡಿಸ್ತಿದ್ದಾರೆ..? ಎಲ್ಲವೂ ನನಗೆ ಗೊತ್ತಿದೆ ಎಂದಿರುವ ಡಿ.ಕೆ.ಶಿವಕುಮಾರ್‌, ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದಿದ್ದಾರೆ..

 

Share Post