BengaluruPolitics

ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಗೋವಿಂದ ರಾಜು, ನಸೀರ್‌ ಅಹ್ಮದ್‌ ನೇಮಕ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಗಳಾಗಿ ಪರಿಷತ್‌ ಸದಸ್ಯ ಗೋವಿಂದರಾಜು ಹಾಗೂ ನಸೀರ್‌ ಅಹ್ಮದ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಸಲಹೆಗಾರನನ್ನೂ ನೇಮಿಸಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪರ ಚುನಾವಣಾ ತಂತ್ರಗಾರಿಕೆ ನಡೆಸಿ ಯಶಸ್ವಿಯಾಗಿದ್ದ ಚುನಾವಣಾ ತಂತ್ರಗಾರ ಆಂಧ್ರ ಮೂಲದ ಸುನಿಲ್‌ ಕನುಗೋಳ್‌ ಅವರನ್ನು ಮುಖ್ಯ ಸಲಹೆಗಾರನಾಗಿ ನೇಮಿಸಲಾಗಿದೆ.

ಮೂವರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ಡಾ.ಕೆ.ಗೋವಿಂದರಾಜು ಅವರು ಏಷ್ಯಾ ಬಾಸ್ಕೆಟ್‌ಬಾಲ್‌ನ ನೂತನ ಅಧ್ಯಕ್ಷರಾಗಿ ಕಳೆದ ತಿಂಗಳು ನೇಮಕವಾಗಿದ್ರು. ಇನ್ನು ಸುನಿಲ್‌ ಕುನಗೊಳ್‌ ಅವರು ಪೇಸಿಎಂ ಹಾಗೂ ಸೇಸಿಎಂ ಅಭಿಯಾನದ ಐಡಿಯಾ ಕೊಟ್ಟಿದ್ದರು. ಜೊತೆಗೆ ಉಚಿತ ಗ್ಯಾರೆಂಟಿಗಳ ಸೂತ್ರಧಾರಿ ಕೂಡಾ ಇವರೇ ಆಗಿದ್ದರು.

Share Post