BengaluruUncategorized

ಚಂದ್ರು ಕೊಲೆ ಪ್ರಕರಣ; ಬುದ್ಧಿಜೀವಿಗಳ ಮೌನವಾಗಿರೋದು ಯಾಕೆ..? – ಸಿ.ಟಿ.ರವಿ ಪ್ರಶ್ನೆ

ಬೆಂಗಳೂರು: ಉರ್ದು ಭಾಷೆ ಮಾತಾಡೋದಕ್ಕೆ ಬರೋದಿಲ್ಲ ಎಂದಿದ್ದಕ್ಕೆ ಗೋರಿಪಾಳ್ಯದಲ್ಲಿ ಚಂದ್ರು ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಉರ್ದು ಬರೋದಿಲ್ಲ ಎಂದಿದ್ದಕ್ಕೆ ಕೊಲೆ ಮಾಡಿದ್ದಾರೆ. ಆದರೂ ಬುದ್ಧಿಜೀವಿಗಳು ಒಂದೂ ಮಾತನಾಡುತ್ತಿಲ್ಲ. ಎಲ್ಲರೂ ಮೌನವಾಗಿದ್ದಾರೆ. ಸತ್ತವರು ಹಿಂದೂ ಆದರೆ ಡಿ.ಕೆ.ಶಿವಕುಮಾರ್‌ ಒಂದೂ ಮಾತನಾಡೋದಿಲ್ಲ. ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post