BengaluruPolitics

ಡಿ.ಕೆ.ಶಿವಕುಮಾರ್‌ ಅವರೇ ಬ್ರ್ಯಾಂಡ್‌ ಬೆಂಗಳೂರು ಅಂದ್ರೆ ಇದೇನಾ..?

ಬೆಂಗಳೂರು; ಡಿಸಿಎಂ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಅಂದ್ರೆ ಇದೇನಾ ಅಂತ ಜೆಡಿಎಸ್‌ ಪ್ರಶ್ನೆ ಮಾಡಿದೆ.. ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಲಾಗಿದೆ.. ರಾತ್ರಿ ಸುರಿದ ಮಹಿಳೆಯಿಂದಾಗಿ ಬೆಂಗಳೂರು ನಗರದಲ್ಲಿ ಆದ ಅವಾಂತರದ ಬಗ್ಗೆ ಬರೆಯಲಾಗಿದೆ.. ರಾತ್ರಿ ಸುರಿದ ಮಳೆಯಿಂದಾಗಿ ಜನ ನಾನಾ ಸಂಕಷ್ಟ ಅನುಭವಿಸಿದ್ದಾರೆ.. ಅಂಡರ್‌ಪಾಸ್‌ಗಳಲ್ಲೆಲ್ಲಾ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ.. ಇದೇ ಬ್ರ್ಯಾಂಡ್‌ ಬೆಂಗಳೂರು ಅಂದ್ರೆ..? ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಜೆಡಿಎಸ್‌ ಪ್ರಶ್ನೆ ಮಾಡಿದೆ..

ಇದನ್ನೂ ಓದಿ; ಪತ್ನಿ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ!; ಪತ್ನಿ ದೂರು ಕೊಟ್ಟಿದ್ದಕ್ಕೆ ನೇಣಿಗೆ ಶರಣು!

ರಾತ್ರಿ ಬೆಂಗಳೂರಲ್ಲಿ ಕೇವಲ 3-4 ಗಂಟೆ ಸುರಿದಿದೆ.. ಇದಕ್ಕೇ ಬೆಂಗಳೂರಿನ ಹಲವಾರು ಪ್ರದೇಶಗಳು ಜಲಾವೃತವಾಗಿವೆ.. ಮನೆಗಳಿಗೆ ನೀರು ನುಗ್ಗಿದೆ.. ಅಪಾರ್ಟ್‌ಮೆಂಟ್‌ಗಳ ಜನ ಕಂಗಾಲಾಗಿದ್ದಾರೆ.. ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ಆಳೆತ್ತರತಕ್ಕೆ ನೀರು ನಿಂತಿದೆ.. ಸರ್ಜಾರ ಏನು ಮಾಡುತ್ತಿದೆ. ಆಸ್ತಿ ತೆರಿಗೆ ಜಾಸ್ತಿ ಮಾಡಲಾಯಿತು.. ಅದರಿಂದ ಬಂದ ಸಾವಿರಾರು ಕೋಟಿ ಹಣ ಏನಾಯಿತು ಎಂದು ಜೆಡಿಎಸ್‌ ಪ್ರಶ್ನೆ ಮಾಡಿದೆ..

ಇದನ್ನೂ ಓದಿ; ನವಿಲು ಮಾಂಸದ ಅಡುಗೆ ತಯಾರಿಸಿ ಯೂಟ್ಯೂಬರ್‌!; ಕಂಬಿ ಎಣಿಸುತ್ತಿದ್ದಾನೆ ಆರೋಪಿ

Share Post