CrimeDistricts

ಪತ್ನಿ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ!; ಪತ್ನಿ ದೂರು ಕೊಟ್ಟಿದ್ದಕ್ಕೆ ನೇಣಿಗೆ ಶರಣು!

ಚಿತ್ರದುರ್ಗ; ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.. ಪತಿಯ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಇದರಿಂದ ಮನನೊಂದು ಪತಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.. ಚಿತ್ರದುರ್ಗ ನಗರದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ನವಿಲು ಮಾಂಸದ ಅಡುಗೆ ತಯಾರಿಸಿ ಯೂಟ್ಯೂಬರ್‌!; ಕಂಬಿ ಎಣಿಸುತ್ತಿದ್ದಾನೆ ಆರೋಪಿ

ಚಿತ್ರದುರ್ಗ ನಗರದ IUDP ಲೇಔಟ್ ನಿವಾಸಿ ಮಂಜುನಾಥ(38) ಆತ್ಮಹತ್ಯೆ ಮಾಡಿಕೊಂಡವರು.. ಎರಡು ವರ್ಷಗಳ ಹಿಂದಷ್ಟೇ ಮಂಜುನಾಥ್‌ ಅವರು ಚೇತನಾ ಎಂಬುವವರನ್ನು ಮದುವೆಯಾಗಿದ್ದರು.. ಆದ್ರೆ ಮನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು.. ಮಂಜುನಾಥ್‌ಗೆ ಪತ್ನಿ ಚೇತನಾ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗುತ್ತಿದೆ..
ಮಂಜುನಾಥ್‌ ಅವರು ಜಿಲ್ಲಾಸ್ಪತ್ರೆ CT ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.. ದಂಪತಿ ನಡುವೆ ಕಲಹ ಇತ್ತು.. ಇದೇ ಕಾರಣಕ್ಕಾಗಿ ಪತ್ನಿ ಚೇತನಾ ತನ್ನ ಪತಿ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದಳು.. ಇದರಿಂದ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.. ಈ ಬಗ್ಗೆ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ; ಭೀಕರ ರಸ್ತೆ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳ ದುರ್ಮರಣ!

Share Post