National

ಹಿಜಾಬ್‌ ವಿವಾದಕ್ಕೆ ಕೈ-ಕಮಲ ನಾಯಕರೇ ಕಾರಣ-HDDಗಂಭೀರ ಆರೋಪ

ದೆಹಲಿ: ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಮತೀಯ ಗಲಭೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರೇ ನೇರ ಕಾರಣ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ(HDD) ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣ ವಿಸ್ತೃತ ಪೀಠಕ್ಕೆ ಹೋಗಿದೆ ಅಂದ್ರೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಅಂತ ಅರ್ಥ. ಸರ್ಕಾರ ಈ ವಿವಾದವನ್ನು ಹತ್ತಿಕ್ಕಬಹುದಾಗಿತ್ತು ಆದರೆ ಹಾಗೆ ಮಾಡಿಲ್ಲ. ಸರ್ಕಾರಕ್ಕೆ ಮೊದಲೇ ಎಲ್ಲಾ ರೀತಿಯ ಮಾಹಿತಿ ಇರುತ್ತದೆ. ಆದರೂ ಹೀಗೆ ಯಾಕಾಯ್ತು ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ.

ವಿವಾದ ನಡೆಯಲಿ ಎಂದು ಬಿಜೆಪಿಯವರೇ ಬಿಟ್ಟಿದ್ದಾರೆ. ಬಿಜೆಪಿಯವರೇ ಈ ವಿಚಾರವನ್ನು ದೊಡ್ಡದಾಗಿ ಬೆಳೆಯಲು ಬಿಟ್ಟಿದ್ದು. ನಮ್ಮ ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದಯ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎರಡು ಪಕ್ಷದ ನಾಯಕರು ಜನರನ್ನು ಪ್ರಚೋದಿಸುತ್ತಿದ್ದಾರೆ. ನಮ್ಮ ಪಕ್ಷದ ಯಾವ ನಾಯಕರೂ ಪ್ರಚೋದನೆ ನೀಡಿಲ್ಲ ಎಂದು ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್‌ಡಿಡಿ ಹೇಳಿದ್ದಾರೆ. ರಾಜ್ಯದ ಜನ ನೋವು ಅನುಭವಿಸಬೇಕಾಗುತ್ತದೆ. ರಾಜ್ಯದ ಆಸ್ತಿಪಾಸ್ತಿಗೆ ನಷ್ಟ ಉಂಟಾಗಲಿದೆ. ರಾಜ್ಯದ ಸಚಿವರೇ ಪ್ರಚೋದನೆ ಮಾಡುತ್ತಿರುವುದು ಸತ್ಯ.

ರಾಜ್ಯ ಸರ್ಕಾರಕ್ಕೆ ಸರಿಯಾಗಿ ತಿಳಿಹೇಳುವ ನಾಯಕತ್ವ ಇಲ್ಲದಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು(Modi) ಗಂಟೆಗಟ್ಟಲೆ ಭಾಷಣ ಮಾತ್ರ ಮಾಡ್ತಾರೆ. ಆದ್ರೆ ರಾಜ್ಯದಲ್ಲಿ ಸಚಿವರೇ ಪ್ರಚೋದನೆ ಮಾಡ್ತಿದಾರೆ ಎಂದು ದೇವೇಗೌಡರು ಆರೋಪ ಮಾಡಿದ್ದಾರೆ.

Share Post