DistrictsHealth

ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವಾಗ ಎದ್ದು ಕುಳಿತ ವ್ಯಕ್ತಿ!

ರಾಮನಗರ; ಬೆಳಗ್ಗೆ 6.30ರ ಸುಮಾರಿಗೆ ಮನೆಯ ಬಳಿ ಕುಸಿದುಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಪರೀಕ್ಷೆ ಮಾಡಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದರು.. ಆದ್ರೆ ಮಧ್ಯಾಹ್ನ 12 ಗಂಟೆಗೆ ಆ ವ್ಯಕ್ತಿ ಎದ್ದು ಕೂತಿದ್ದಾನೆ. ಸಂಸ್ಕಾರಕ್ಕೆ ಕೊಂಡೊಯ್ಯುವಾಗ ವ್ಯಕ್ತಿ ಬದುಕಿದ್ದು, ಮತ್ತೆ ಮನೆಗೆ ವಾಪಸ್‌ ಕರೆತರಲಾಗಿದೆ..

ಇದನ್ನೂ ಓದಿ; ಶೋಭಾ ಕರಂದ್ಲಾಜೆ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಯುವಕನ ಬಲಿ!

ಆಸ್ಪತ್ರೆಗೆ ಹೋಗುವಾಗ ಮತ್ತೆ ಸಾವನ್ನಪ್ಪಿದ ವ್ಯಕ್ತಿ;

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹುಚ್ಚಯ್ಯದೊಡ್ಡಿಯಲ್ಲಿ ಈ ಘಟನೆ ನಡೆದಿದೆ.. ಕೂಲಿ ಕೆಲಸ ಮಾಡುವ ಶಿವರಾಮು ಎಂಬಾತನೇ ಸಾವನ್ನಪ್ಪಿದ ವ್ಯಕ್ತಿ.. ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಶಿವರಾಮ ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ಎದ್ದು ಕುಳಿತಿದ್ದರು. ವೈದ್ಯರು ಬಂದು ಪರೀಕ್ಷೆ ಮಾಡಿ ಹೃದಯಘಾತ ಆಗುತ್ತಿದೆ.. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು.. ಅದರಂತೆ ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.. ಆದ್ರೆ ಮಾರ್ಗಮಧ್ಯೆ ಮತ್ತೆ ಶಿವರಾಮು ಮೃತಪಟ್ಟಿದ್ದಾರೆ.. ಮತ್ತೆ ಅವರ ದೇಹವನ್ನು ಮನೆಯ ಬಳಿಗೆ ತರಲಾಗಿದೆ.. ಮತ್ತೆ ಬದುಕಬಹುದು ಎಂದು ಮನೆಯ ಬಳಿಯೇ ದೇಹವನ್ನಿಟ್ಟುಕೊಂಡು ಮನೆಯವರು ಕೂತಿದ್ದಾರೆ..

ಶಿವರಾಮು ಅವರಿಗೆ ಮತ್ತೆ ಜೀವ ಬರಬಹುದು ಎಂದು ಎಲ್ಲರೂ ಕಾಯುತ್ತಿದ್ದಾರೆ.. ಮತ್ತೊಂದೆಡೆ ಶವಸಂಸ್ಕಾರಕ್ಕೂ ಸಿದ್ಧತೆ ಮಾಡಲಾಗುತ್ತಿದೆ..

ಇದನ್ನೂ ಓದಿ; ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಂಗಳಮುಖಿ ಅಖಾಡಕ್ಕೆ..!

 

Share Post