DistrictsPolitics

ಬೇಕಂತಲೇ ಕಲ್ಲು ಹೊಡೆದಿರೋದು, ಹೂವಲ್ಲಿ ಬಂದಿರೋದಲ್ಲ; ಡಾ.ಜಿ.ಪರಮೇಶ್ವರ್‌

ತುಮಕೂರು; ಭೈರೇನಹಳ್ಳಿಯಲ್ಲಿ ಪ್ರಚಾರ ಮಾಡುವ ವೇಳೆ ಜೆಸಿಬಿಯಿಂದ ಹೂವು ಹಾಕಲಾಗುತ್ತಿತ್ತು. ಈ ವೇಳೆ ನನ್ನ ತಲೆಯಿಂದ ರಕ್ತ ಬರ್ತಾ ಇತ್ತು. ಆದ್ರೆ ಕಲ್ಲು ಹೂವಿನ ಜೊತೆ ಬಂದಿಲ್ಲ. ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್‌, ನನಗೆ ವಿರೋಧಿಗಳು ತುಂಬಾನೇ ಕಡಿಮೆ ಇದ್ದಾರೆ. ಆದ್ರೆ ದ್ವೇಷ ಇದ್ರೆ ಈ ರೀತಿ ಮಾಡೋದು ಸರಿಯಾದುದಲ್ಲ ಎಂದು ಹೇಳಿದರು.

ಭೈರೇನಹಳ್ಳಿಯಲ್ಲಿ ಮೆರವಣಿಗೆ ವೇಳೆ ಜೆಸಿಬಿಯಿಂದ ಹೂವು ಹಾಕುತ್ತಿದ್ದರು. ಈ ವೇಳೆ ಯಾರೋ ಕಲ್ಲೆಸೆದಿದ್ದಾರೆ. ಇದೇ ವೇಳೆ ನಮ್ಮ ಆಸ್ಪತ್ರೆ ವೈದ್ಯರೊಬ್ಬರು ನನ್ನನ್ನ ಭೇಟಿಯಾಗೋಕೆ ಬಂದಿದ್ದರು. ತಕ್ಷಣ ಅವರು ನನಗೆ ಅಲ್ಲೇ ಚಿಕಿತ್ಸೆ ಕೊಟ್ಟರು. ಅನಂತರ ಅಕ್ಕಿರಾಂಪುರ ಆರೋಗ್ಯ ಕೇಂದ್ರಕ್ಕೆ ಕರೆತಂದರು ಎಂದರು.

ಆದ್ರೆ ನಾನು ಯಾರ ಮೇಲೂ ಅನುಮಾನಪಡುವುದಿಲ್ಲ. ಪೊಲೀಸರೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ನನಗೆ ಯಾವುದೇ ಭಯವಿಲ್ಲ. ಏನೇ ತೊಂದರೆ ಎದುರಾದರೂ ಅದನ್ನು ನಾನು ಎದುರಿಸಲು ಸಿದ್ಧ ಎಂದು ಪರಮೇಶ್ವರ್‌ ಇದೇ ವೇಳೆ ಹೇಳಿದ್ದಾರೆ.

Share Post