DistrictsPolitics

ಸಿದ್ದರಾಮಯ್ಯ ಕುಸಿದಿದ್ದಕ್ಕೆ ಟೀಕೆ ಮಾಡುವುದನ್ನು ನಾನು ಒಪ್ಪಲ್ಲ; ಯಡಿಯೂರಪ್ಪ

ರಾಯಚೂರು; ಸಿದ್ದರಾಮಯ್ಯ ಅವರು ಕಾರು ಹತ್ತುವಾಗ ಕುಸಿದಿದ್ದು, ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿರುವ ಮಾಜಿ ಸಿಎಂ ಯಡಿಯೂರಪ್ಪ, ಈ ವಿಚಾರವಾಗಿ ಸಿದ್ದರಾಮಯ್ಯರನ್ನ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಹಾಗಂತ ಇಂತಹ ವಿಚಾರಗಳನ್ನಿಟ್ಟುಕೊಂಡು ಟೀಕೆ ಮಾಡುವುದು ತಪ್ಪಾಗುತ್ತದೆ. ಅದನ್ನು ನಾನು ಒಪ್ಪೋದು ಕೂಡಾ ಇಲ್ಲ. ಸಿದ್ದರಾಮಯ್ಯ ಅವರು ಸುಧಾರಿಸಿಕೊಳ್ಳಲಿ. ಅವರಿಗೆ ಒಳ್ಳೆಯದಾಗಲಿ ಎಂದು ಯಡಿಯೂರಪ್ಪ ಹಾರೈಸಿದ್ದಾರೆ.

ಇನ್ನು ಇದೇ ವೇಳೆ 85 ರಿಂದ 90 ಭಾಗ ವೀರಶೈಲ ಲಿಂಗಾಯತರು ನಮ್ಮ ಪರವಾಗಿದ್ದಾರೆ. ಯಾವತ್ತಿಗೂ ಅವರು ಬಿಜೆಪಿ ಪರವಾಗಿಯೇ ಇರುತ್ತಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Share Post