DistrictsPolitics

ಸೋನಿಯಾ, ರಾಹುಲ್‌ ಸೂಚನೆಯಂತೆ ಖರ್ಗೆ ಹೇಳಿಕೆ; ಜೆ.ಪಿ.ನಡ್ಡಾ ಆರೋಪ

ಧಾರವಾಡ; ಮೋದಿ ವಿಷ ಸರ್ಪ ಎಂದು ಸೋನಿಯಾ, ರಾಹುಲ್‌ ಗಾಂಧಿ ಸೂಚನೆಯಂತೆ ಖರ್ಗೆಯವರು ಹೇಳಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಖರ್ಗೆಯವರು ಇಂತಹ ಹೇಳಿಕೆಗಳನ್ನು ನೀಡಬಾರದು. ಇದು ಶೋಭೆ ತರುವಂತಹದ್ದಲ್ಲ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರ ಸೂಚನೆಯಂತೆ ಮಲ್ಲಿಕಾರ್ಜುನ ಖರ್ಗೆಯವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖರ್ಗೆಯವರು ಮನಸ್ಸಿನಲ್ಲಿರುವ ವಿಷವನ್ನು ಕಕ್ಕಿದ್ದಾರೆ. ಖರ್ಗೆಯಂತಹ ಹಿರಿಯ ನಾಯಕರು ಇಂತಹ ಕೆಳಮಟ್ಟದ ಮಾತುಗಳನ್ನು ಆಡಬಾರದು ಎಂದು ನಡ್ಡಾ ಹೇಳಿದರು.

Share Post