Districts

ಕಾಮಗಾರಿ ಹಿನ್ನೆಲೆ: ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ

ಚಿಕ್ಕಬಳ್ಳಾಪುರ: ವಿದ್ಯುತ್‌ ಸ್ವೀಕರಣಾ ಕೇಂದ್ರಗಳಲ್ಲಿ ಕೆ.ವಿ.ಪ್ರ.ನಿ.ನಿ ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣದಿಂದ ನಾಳೆ ಗೌರಿಬಿದನೂರು ತಾಲೂಕಿನಾದ್ಯಂತ ಹಲವೆಡೆ ವಿದ್ಯುತ್‌ ವ್ಯತ್ಯಯಗೊಳ್ಳಲಿದೆ. ಈ ಬಗ್ಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸುತ್ತೋಲೆ ಹೊರಡಿಸಿದೆ. ಗೌರಿಬಿದನೂರು ಮತ್ತು ಮಿಟ್ಟೆಮರಿ ವಿದ್ಯುತ್‌ ಸ್ವೀಕರಣಾ ಕೇಂದ್ರಗಳಿಂದ ಸರಬರಾಜಾಗುವ ಗೌರಿಬಿದನೂರು, ರಮಾಪುರ, ತೊಂಡೇಭಾವಿ, ಎಸಿಸಿ, ಇಹೆಚ್‌ಟಿ, ಮಂಚೇನಹಳ್ಳಿ, ವಿದುರಾಶ್ವತ್ಥ, ಪೆರೆಸಂದ್ರ, ಮಂಡಿಕಲ್ಲು, ಗುಡಿಬಂಡೆ, ಡಿ-ಪಾಳ್ಯ, ವಾಟದಹೊಸಹಳ್ಳಿ, ಜಿ.ಕೊತ್ತೂರು, ಸೋಮೇನಹಳ್ಳಿ, ಬಾಗೇಪಲ್ಲಿ, ಮಿಟ್ಟೆಮರಿ, ತಿಮ್ಮಂಪಲ್ಲಿ, ಸೋಮನಾಥಪುರ, ಪಾತಪಾಳ್ಯ, ಜೂಲಪಾಳ್ಯ, ಚೇಳೂರು ಚಾಕವೇಲು ಉಪವಿದ್ಯುತ್‌ ಕೇಂದ್ರಗಳಿಗೆ ಕರೆಂಟ್‌ ಸ್ಥಗಿತಗೊಳ್ಳಲಿದೆ.

ಇಲ್ಲಿಂದ ಸರಬರಾಜಾಗುವ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಪಟ್ಟಣ ಸೇರಿದಂತೆ ಎಲ್ಲಾ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಿಗೆ ದಿನಾಂಕ 19/01/2022 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ಮನವಿ ಮಾಡಿಕೊಂಡಿದೆ.

 

 

Share Post