Crime

ಕೊರೊನಾದಿಂದ ಆರ್ಥಿಕ ಸಂಕಷ್ಟ; ಇಡೀ ಕುಟುಂಬ ಆತ್ಮಹತ್ಯೆಗೆ ಶರಣು..!

ನಾಗ್ಪುರ: ಮಹಾರಾಷ್ಟ್ರದ ನಾಗಪುರದಲ್ಲಿ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ವ್ಯಕ್ತಿಯೊಬ್ಬರು ತನ್ನ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾರೆ. ನಾಗಪುರದ ದಯಾನಂದ ಪಾರ್ಕ್‌ ಸಮೀಪದ ಮನೆಯಲ್ಲಿ ಈ ದುರಂತ ನಡೆದಿದೆ.

    ಮದನ್‌ ಹಾಗೂ ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಮೃತರು. ಮದನ್‌ ಚೂನೀಸ್‌ ಫುಡ್‌ ಸ್ಟಾಲ್‌ ನಡೆಸುತ್ತಿದ್ದ. ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮದನ್‌, ಹಲವರ ಬಳಿ ಸಾಲ ಮಾಡಿಕೊಂಡಿದ್ದನಂತೆ. ಈ ಕಾರಣ್ಕಕಾಗಿಯೇ ಮದನ್‌, ತನ್ನ ಪತ್ನಿ ಹಾಗೂ ಹತ್ತು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮನೆಯಲ್ಲಿ ಮೂರು ದೇಹಳು ರಕ್ತಸಿಕ್ತವಾಗಿ ಸಿಕ್ಕಿವೆ. ಮದನ್‌ ಮಾತ್ರ ನೇಣಿಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Share Post