Districts

ಕೌಟುಂಬಿಕ ವ್ಯಾಜ್ಯ; ಕೋರ್ಟ್‌ ಆವರಣದಲ್ಲಿ ಕತ್ತು ಸೀಳಿ ಕೊಲೆ ಯತ್ನ

ದಾವಣಗೆರೆ: ಕೌಟುಂಬಿಕ ವ್ಯಾಜ್ಯದ ಹಿನ್ನೆಲೆಯಲ್ಲಿ ಕೋರ್ಟ್‌ ಹಾಜರಾಗಿದ್ದ ವ್ಯಕ್ತಿಯ ಕತ್ತು ಸೀಳಿ ಕೊಲೆ ಯತ್ನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ನಡೆದಿದೆ. ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದ 35 ವರ್ಷದ ಮಂಜುನಾಥ್‌ ಚಾಕುವಿನಿಂದ ಹಲ್ಲೆಗೊಳಗಾದವರು. ಮಂಜುನಾಥ್‌ ತೀವ್ರವಾಗಿ ಗಾಯಗೊಂಡಿದ್ದರೂ, 45 ನಿಮಿಷ ಯಾರೂ ಹತ್ತಿರಕ್ಕೆ ಸುಳಿದಿರಲಿಲ್ಲ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಮಂಜುನಾಥ್‌ ಪತ್ನಿಯ ಸಹೋದರ ಮಲ್ಲಿಕಾರ್ಜುನ್‌ ಚಾಕುವಿನಿಂದ ಹಲ್ಲೆ ಮಾಡಿದಾತ. ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಮಂಜುನಾಥ್‌ ದಂಪತಿ ದೂರವಾಗಿದ್ದರು. ಹೀಗಾಗಿ ಜೀವನಾಂಶ ಕೋರಿ ಮಂಜುನಾಥ್‌ ಪತ್ನಿ ಜಗಳೂರು ಕೋರ್ಟ್‌ ಮೊರೆ ಹೋಗಿದ್ದರು. ಇಂದು ವಿಚಾರಣೆ ಇದ್ದುದರಿಂದ ಮಂಜುನಾಥ್‌ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಏಕಾಏಕಿ ಮಲ್ಲಿಕಾರ್ಜುನ್‌ ಚಾಕುವಿನಿಂದ ಮಂಜುನಾಥ್‌ ಕತ್ತು ಸೀಳಿದ್ದಾನೆ.

Share Post