CrimeDistricts

ಮಾಜಿ ಶಾಸಕರ ಪುತ್ರ ಹಾಗೂ ಪತ್ರಕರ್ತನ ಪುತ್ರನ ಹೊಡೆದಾಟ

ಮೈಸೂರು; ಮೈಸೂರಿನಲ್ಲಿ ಮಾಜಿ ಶಾಸಕನ ಪತ್ರ ಹಾಗೂ ಪತ್ರಕರ್ತನ ಪುತ್ರನ ನಡುವೆ ಹೊಡೆದಾಟ ನಡೆದಿದೆ. ಮಾಜಿ ಶಾಸಕ ಸಾ.ರಾ.ಮಹೇಶ್‌ ಪುತ್ರ ಸಾ.ರಾ.ಜಯಂತ್‌ ಹಾಗೂ ಪತ್ರಕರ್ತ ಟಿ.ಗುರುರಾಜ್‌ ಪುತ್ರನ ನಡುವೆ ಗಲಾಟೆ ನಡೆದಿದ್ದು, ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಖಾಸಗಿ ಹೋಟೆಲ್‌ ಬಳಿ ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ. ನಂತರ ಠಾಣೆಗೆ ಕರೆತಂದು ಇಬ್ಬರಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Share Post