Crime

ಸಿಲಿಕಾನ್‌ ಸಿಟಿಯಲ್ಲಿ ಆರಕ್ಷಕರಿಗೇ ಇಲ್ಲ ರಕ್ಷಣೆ..!?

ಬೆಂಗಳೂರು: ಪೊಲೀಸರು ಅಂತ ಗೊತ್ತಿದ್ದೂ ಎಸ್‌ಐ ಹಾಗೂ ಪೇದೆ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇತ್ತೀಚೆಗೆ ನಗರದಲ್ಲಿ ಪುಡಾರಿಗಳ ಪುಂಡಾಟ ಮಿತಿಮೀರುತ್ತಿದೆ, ಮೊದಮೊದಲು ಸಾರ್ವಜನಿಕರಿಗೆ ಕಿರಿಕಿರಿ ಕೊಡ್ತಿದ್ದವರು ಈಗ ಏಕಾಏಕಿ ಪೊಲೀಸರನ್ನೇ ಹೊಡೆಯುವ ಮಟ್ಟಕ್ಕಿಳಿದಿದ್ದಾರೆ. ನಿನ್ನೆ ರಾತ್ರಿ ಯಲಹಂಕದ ಚಿಕ್ಕಬೆಟ್ಟದಹಳ್ಳಿಯಲ್ಲಿ ಕಿಡಿಗೇಡಿಗಳು ಒನ್‌ವೇ ಯಲ್ಲಿ ಬರುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾರೆ, ಪೊಲೀಸರ ಕೈಯಲ್ಲಿದ್ದ ಲಾಠಿ ಕಸಿದುಕೊಂಡು, ಪೊಲೀಸರ ಬಟ್ಟೆ ಎಳೆದಾಡಿ, ಯಾವುದೋ ಸ್ಟೇಷನ್‌ ನಿಂದು ಅಂತ ಅಹಂಕಾರದಿಂದ ಮಾತನಾಡಿದ್ದಾರೆ.  ಮೇಲ್ನೋಟಕ್ಕೆ ಪುಂಡರ ಗುಂಪು ಮತ್ತಿನಲ್ಲಿದ್ದರು ಅಂತ ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೋನ್‌ ಸ್ವಿಚ್‌ ಆಫ್‌ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

Share Post