Cinema

ವಿಚ್ಛೇದನ ಬಳಿಕ ನಾನು ಬದುಕಬಲ್ಲೆನಾ..? ಎಂಬ ಪ್ರಶ್ನೆ ಕಾಡಿತ್ತು:ಸಮಂತಾ

 

ಟಾಲಿವುಡ್:‌ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಮಂತಾ ನೀಡಿರುವ ಹೇಳಿಕೆಯೊಂದು ಆಶ್ಚರ್ಯಕರವಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಟಾಲಿವುಡ್‌ನ ಹಾಟ್‌ ಜೋಡಿಯಲ್ಲಿ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ಕೂಡ ಒಬ್ರು, ಆದ್ರೆ ಕೆಲ ದಿನಗಳ ಹಿಂದೆ ದಾಂತಪ್ಯ ಜೀವನಕ್ಕೆ ನಾಂದಿ ಹಾಡಿ ಸ್ಯಾಮ್‌-ಚೈತು ಜೋಡಿ ವಿಚ್ಛೇದನ  ಕೂಡ ಪಡೆದಿದ್ರು, ಬಳಿಕ ಸಮಂತಾಳನ್ನು ನೆಟ್ಟಿಗರು, ಅಭಿಮಾನಿಗಳು ಸೋಶಿಯಲ್‌ ಮಾಡಿಯಾದಲ್ಲಿ ಟ್ರೋಲ್‌ ಮಾಡಿದ್ರು, ಯಾವುದಕ್ಕೂ ಧೃತಿಗೆಡದ ಸಮಂತಾ ಎಲ್ಲರಿಗೂ ಬಹಳ ಖಾರವಾಗಿಯೇ ಉತ್ತರ ನೀಡಿದ್ರು, ಬಳಿಕ ಸ್ಯಾಮ್‌ ತನ್ನ ಜೀವನದ ಕೆಲವೊಂದು ವಿಚಾರಗಳನ್ನು ಆಗಿಂದಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತಿದ್ರು, ಯಾವುದೇ ಟ್ರೋಲ್‌, ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಸಮಂತಾ ವಿಚ್ಛೇದನದ ಬಳಿಕ ತಮ್ಮನ್ನು ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡ್ರು. ಸಾಲು-ಸಾಲು ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ರು, ಹೀಗಿರುವಾಗ ಮೊನ್ನೆ ನಡೆದ ಫಿಲ್ಮ್‌ ಫೇರ್‌ ಪ್ರಶಸ್ತಿ ಸಂದರ್ಶನವೊಂದರಲ್ಲಿ ಕುತೂಹಲಕಾರಿ ವಿಚಾರವೊಂದನ್ನು ಹೇಳಿದ್ರು, “ವಿಚ್ಛೇದನ ಬಳಿಕ ನಾನು ಬದುಕುತ್ತೀನಾ” ಎಂಬ  ಪ್ರಶ್ನೆ ನನ್ನನ್ನು ಕಾಡಿತ್ತು, ಬದುಕು ಅಂದಮೇಲೆ ಕೆಲವೊಂದು ಕೆಟ್ಟದಿನಗಳನ್ನು ಎದುರಿಸಲೇಬೇಕು, ಇದು ಮುಗಿಯದ ಗೋಜು, ದಾಂಪತ್ಯ ಜೀವನ ಸಾಕಾಗಿತ್ತು ಅದು ನನ್ನ ಸಮಸ್ಯೆ, ಇದ್ರಿಂದ ಹೊರಗೆ ಬಂದು ಬದುಕಬೇಕು ಅನ್ನೋದು ನನ್ನ ಬಲವಾದ ನಂಬಿಕೆ.  ಎಲ್ಲವನ್ನು ಧೈರ್ಯವಾಗಿ ಎದುರಿಸಿ ಮುಂದೆ ನಡೆಯುವುದೇ ಜೀವನ ಎಂದಿದ್ದಾರೆ ಸಮಂತಾ.

Share Post