CrimeDistricts

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ; ಐಸಿಸ್‌ ಪಿಡಿಎಫ್‌ ಮಾಹಿತಿ ನೀಡಿ ಬಾಂಬ್‌ ತಯಾರಿ..?

ಮಂಗಳೂರು; ಮಂಗಳೂರು ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಆರೋಪಿ ಶಾರೀಖ್‌ ಯಾವುದೇ ತರಬೇತಿ ಇಲ್ಲದೆ ಬಾಂಬ್‌ ತಯಾರು ಮಾಡಿದ್ದ ಅನ್ನೋದು ಮಾಹಿತಿ ಹೊರಬಿದ್ದಿದೆ. ಮೋಸ್ಟ್‌ ವಾಂಟೆಡ್‌ ಉಗ್ರ ಮತೀನ್‌ ಸಹಾಯದಿಂದ ಬಾಂಬ್‌ ತಯಾರಿಸುವ ವಿಧಾನದ ಪಿಡಿಎಫ್‌ ಮಾಹಿತಿಯನ್ನು ಶಾರೀಖ್‌ ತರಿಸಿಕೊಂಡಿದ್ದ ಎನ್ನಲಾಗಿದೆ. ಆ ಮಾಹಿತಿಯನ್ನಿಟ್ಟುಕೊಂಡು ಯಾವುದೇ ತರಬೇತಿ ಪಡೆಯದೇ ಶಾರೀಖ್‌ ಬಾಂಬ್‌ ತಯಾರಿಸಿದ್ದಾನೆ. ಅನಂತರ ನದಿ ತಟದಲ್ಲಿ ಅದನ್ನು ಟ್ರಯಲ್‌ ಬ್ಲಾಸ್ಟ್‌ ಮಾಡಿದ್ದು, ಅದ್ರಲ್ಲಿ ಸಕ್ಸಸ್‌ ಆಗಿದ್ದ ಎಂದು ಹೇಳಲಾಗುತ್ತಿದೆ.

ಐಸಿಸ್‌ ಉಗ್ರರು ಬಾಂಬ್‌ ತಯಾರಿಸುವ ವಿಧಾನದ ಕುರಿತು ಪಿಡಿಎಫ್‌ ಮಾಹಿತಿ ತಯಾರು ಮಾಡಿದೆ. ಉಗ್ರ ಮತೀನ್‌ ಐಸಿಸ್‌ ಸಂಪರ್ಕದಲ್ಲಿದ್ದು, ಆತ ಈ ಮಾಹಿತಿಯನ್ನು ತರಿಸಿಕೊಂಡಿದ್ದ ಎನ್ನಲಾಗಿದೆ. ಆತ ಶಾರೀಖ್‌ ಮಾಹಿತಿ ರವಾನಿಸಿದ್ದು, ಶಾರೀಖ್‌ ಅದರ ಆಧಾರದ ಮೇಲೆಯೇ ಬಾಂಬ್‌ ತಯಾರು ಮಾಡಿದ್ದ ಎನ್ನಲಾಗಿದೆ. ಮೊದಲಿಗೆ ಕಡಿಮೆ ತೀವ್ರತೆಯ ಬಾಂಬ್‌ ಸ್ಫೋಟಿಸಿ ಜನರನ್ನು ಭಯಭೀತರನ್ನಾಗಿ ಮಾಡುವುದು ಆತನ ಉದ್ದೇಶ ಎಂದು ಹೇಳಲಾಗುತ್ತಿದೆ.

Share Post