Districts

ಕ್ಷುಲ್ಲಕ ಕಾರಣಕ್ಕೆ ಜಗಳ; ಸಕಲೇಶಪುರದಲ್ಲಿ ಹಾಡಹಗಲೇ ಮರ್ಡರ್‌

ಹಾಸನ: ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಹಾಡಹಗಲೇ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆಯಾಗಿದೆ. ಅಕ್ಕಪಕ್ಕದ ಮನೆಯ ಯುವಕರೇ ರಸ್ತೆಯಲ್ಲಿ ಅಟ್ಟಾಡಿಸಿ, ಅಪ್ಸರ್‌ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಸಕಲೇಶಪುರದ ಆಜಾದ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಅಪ್ಸರ್‌ ಅಕ್ಕಪಕ್ಕದ ಮನೆಯವರ ಜೊತೆ ಕಿರಿಕ್‌ ಮಾಡಿಕೊಂಡಿದ್ದ. ಈ ಕಾರಣಕ್ಕಾಗಿಯೇ ಜಗಳ ತಾರಕಕ್ಕೇರಿದೆ. ಈ ವೇಳೆ ಯುವಕರ ಗುಂಪು ಅಪ್ಸರ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದೆ. ಹಾಡಹಗಲೇ ಆಜಾದ್‌ ರಸ್ತೆಯ ಸರ್ಕಲ್‌ ನಲ್ಲಿ ಕೊಲೆ ಮಾಡಲಾಗಿದೆ.

Share Post