CrimeDistricts

ಊರಿಗೆ ಬಸ್‌ ಇಲ್ಲದಿದ್ದರೆ ತಾನೇ ಬಸ್‌ ಓಡಿಸಲು ಹೋದ ಭೂಪ

ಬೀದರ್; ಊರಿಗೆ ಹೋಗಲು ಎಷ್ಟು ಕಾದರೂ ಬಸ್‌ ಬರದೇ ಇದ್ದುದರಿಂದ ಬೇಸತ್ತ ವ್ಯಕ್ತಿಯೊಬ್ಬ, ಬಸ್‌ ಸ್ಟ್ಯಾಂಡ್‌ನಲ್ಲಿ ನಿಂತಿದ್ದ ಬಸ್‌ನ್ನು ತಾನೇ ಓಡಿಸಿ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ. ಬೀದರ್‌ ಜಿಲ್ಲೆ ಔರಾದ್‌ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಾನೇ ಬಸ್‌ ಚಲಾಯಿಸಿದ ವ್ಯಕ್ತಿ ಬಸ್‌ನ್ನು ಡಿವೈಡರ್‌ ಮೇಲೆ ಹತ್ತಿಸಿದ್ದಾನೆ.

ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಎಂಬಾತನೇ ಬಸ್‌ ಓಡಿಸಿದಾತ. ಈತ ಬೆಳಗ್ಗೆಯಿಂದ ತನ್ನ ಊರಿಗೆ ಹೋಗಲು ಬಸ್‌ಗೆ ಕಾಯುತ್ತಿದ್ದ. ಆದ್ರೆ ಬಸ್‌ ಬಂದೇ ಇಲ್ಲ. ಇದೇ ವೇಳೆ ನಿಲ್ದಾಣದಲ್ಲಿ ಬಸ್ ಒಂದನ್ನು ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ಹೋಗಿದ್ದಾರೆ. ಇದೇ ವೇಳೆ ಯಶಪ್ಪ ಅವರು ಬಸ್‌ನ್ನು ತಾನೇ ಡ್ರೈವ್‌ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಬಸ್‌ ಚಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಬಸ್‌ ಚಲಾಯಿಸುವಾಗ ಮೊದಲ ಆತ ಕ್ರೂಸರ್‌ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅನಂತರ ಡಿವೈಡರ್‌ಗೆ ಗುದ್ದಿದ್ದಾನೆ. ಅದೃಷ್ಟವಶಾತ್‌ ಯಾರಿಗೂ ಏನೂ ಆಗಿಲ್ಲ. ಆರೋಪಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ಗೊತ್ತಾಗಿದೆ.

Share Post