CrimeNational

ನರ್ಮದಾ ನದಿಗೆ ಉರುಳಿಬಿದ್ದ ಬಸ್‌; 12 ಮಂದಿ ಸಾವು

ನವದೆಹಲಿ; ನರ್ಮದಾ ನದಿಗೆ ಬಸ್‌ ಉರುಳಿಬಿದ್ದ 12 ಪ್ರಯಾಣಿಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬಸ್‌ ಇಂದೋರ್‌ನಿಂದ ಮಹಾರಾಷ್ಟ್ರದ ಪುಣೆಗೆ ತೆರಳುತ್ತಿತ್ತು. ಮಧ್ಯಪ್ರದೇಶದ ಧಾರ್‌ ಸಮೀಪ ಈ ದುರಂತ ನಡೆದಿದೆ.

ಬಸ್‌ನಲ್ಲಿ 55 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Share Post