BengaluruPolitics

ಬಾಡಿಗೆದಾರರಿಗೆ ಕೂಡಾ ಉಚಿತ ವಿದ್ಯುತ್‌ ಸಿಗುತ್ತೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು; ಬಾಡಿಗೆದಾರರಿಗೆ ಉಚಿತ ವಿದ್ಯುತ್‌ ಸಿಗೋದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಬಾಡಿಗೆದಾರರಿಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಸಿಗಲಿದೆ. 200 ಯೂನಿಟ್‌ ಒಳಗೆ ವಿದ್ಯುತ್‌ ಬಳಸೋರೆಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಯಾರೂ ಕೂಡಾ ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಬಾಡಿಗೆ ಮನೆಯಲ್ಲಿರುವವರೂ ಉಚಿತ ವಿದ್ಯುತ್‌ ಬಳಸಬಹುದು. 200 ಯೂನಿಟ್‌ ಒಳಗೆ ವಿದ್ಯುತ್‌ ಬಳಕೆ ಮಾಡುವ ಬಡವರೆಲ್ಲರಿಗೂ ಈ ಯೋಜನೆ ಅನ್ವಯವಾಗುತ್ತೆ ಎಂದು ಸಿಎಂ ಸ್ಪಷ್ಟನೆ ಕೊಟ್ಟರು. ಇನ್ನೊಂದೆಡೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆಂಬ ವಿಚಾರಕ್ಕೆ ಸಿಎಂ ಟಾಂಗ್‌ ಕೊಟ್ಟರು. ಬಿಜೆಪಿಯವರಿಗೆ ಪ್ರತಿಭಟನೆ ಮಾಡೋದಕ್ಕೆ ನೈತಿಕತೆ ಇಲ್ಲ. ಅವರು ರೈತರಿಗೆ ಹತ್ತು ಗಂಟೆ ವಿದ್ಯುತ್‌ ಕೊಡ್ತೀವಿ ಅಂದ್ರು ಕೊಟ್ರಾ..? ಸಾಲ ಮನ್ನಾ ಮಾಡ್ತೀವಿ ಅಂದ್ರು ಮಾಡಿದ್ರಾ..?, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡ್ತೀವಿ ಅಂದ್ರು ಮಾಡಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

Share Post