CrimeDistricts

ಡೇಟಿಂಗ್‌ ಮಾಡುವಾಗ ಹಿಂದೂ ಹುಡಗಿಯರಿಗೆ ಎಚ್ಚರಿಕೆ ಇರಲಿ; ಪ್ರಮೋದ್‌ ಮುತಾಲಿಕ್‌

ಧಾರವಾಡ; ಹಿಂದೂ ಹುಡುಗಿಯರು ಪ್ರೀತಿ ಮಾಡುವಾಗ, ಡೇಟಿಂಗ್‌ ಮಾಡುವಾಗ ಎಚ್ಚರಿಕೆ ಇರಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣ ತಾಲಿಬಾನ್‌ ಕೃತ್ಯಕ್ಕಿಂತಲೂ ಭೀಕರವಾಗಿದೆ. ಹೀಗಾಗಿ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಲವ್‌ ಜಿಹಾದ್‌ಗೆ ಬಲಿಯಾಗುತ್ತಿರುವ ಯುವತಿಯರಿಗೆ ನಾನು 15 ವರ್ಷದಿಂದಲೂ ಎಚ್ಚರಿಕೆ ಕೊಡುತ್ತಲೇ ಇದ್ದೇನೆ. ಆದ್ರೆ ಇಂತಹ ಪ್ರಕರಣಗಳು ನಿಲ್ಲುತ್ತಿಲ್ಲ. ಹಿಂದೂ ಹುಡುಗಿಯರು ಇದ್ರಿಂದ ಪಾಠ ಕಲಿಯಬೇಕು. ನಾವು ಯಾರ ಜೊತೆ ಓಡಾಡುತ್ತಿದ್ದೇವೆ, ಯಾರ ಜೊತೆ ಪ್ರೀತಿ ಮಾಡುತ್ತಿದ್ದೇವೆ ಎಂಬುದರ ಅರಿವು ಇರಬೇಕು. ಇಲ್ಲದಿದ್ದರೆ ಶ್ರದ್ಧಾ ರೀತಿ ಬೆಲೆ ತೆರಬಹುದಾದ ಅಪಾಯವಿದೆ ಎಂದು ಮುತಾಲಿಕ್‌ ಎಚ್ಚರಿಸಿದ್ದಾರೆ.

Share Post