CrimeDistricts

ನಟ ದರ್ಶನ್‌ ತೋಟದಲ್ಲಿ ನಾಲ್ಕು ಕಾಡು ಪಕ್ಷಿಗಳ ವಶ

ತಿ.ನರಸೀಪುರ; ನಟ ದರ್ಶನ್ ಅವರ ಟಿ.ನರಸೀಪುರದ ಬಳಿಯ ಇರುವ ಫಾರಂ ಹೌಸ್ ಮೇಲೆ ಅರಣ್ಯಾಧಿಕಾರಿಗಳ ದಾಳಿ ನಡೆಸಿದ್ದಾರೆ. ಈ ವೇಳೆ ಪರವಾನಗಿ ಇಲ್ಲದೆ ಸಾಕುತ್ತಿದ್ದರೆನ್ನಲಾದ ನಾಲ್ಕು ಪಕ್ಷಿಗಳು ಪತ್ತೆಯಾಗಿದೆ.

ಪರವಾನಗಿ ಇಲ್ಲದೆ ಸಾಕುತ್ತಿದ್ದ 4 ಪಕ್ಷಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ತಡರಾತ್ರಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಅರಣ್ಯ ಇಲಾಖೆಯ ನೀತಿ ನಿಯಮ ಉಲ್ಲಂಘನೆ ಮಾಡಿ ಕಾಡು ಪಕ್ಷಿಗಳ ಸಾಕಲಾಗುತ್ತಿತ್ತು ಎಂದು ತಿಳಿದುಬಂದಿದೆ. 4 ಬಾರ್ ಹೆಡೆಡ್ ಗೂಸ್ ಪಕ್ಷಿಗಳನ್ನ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Share Post