CrimeDistricts

ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ 3ನೇ ಬಲಿ.

ಮೈಸೂರು; ತಿ.ನರಸೀಪುರ ತಾಲ್ಲೂಕಿನಲ್ಲಿ ಮತ್ತೆ ಚಿರತೆ ಅಟ್ಟಹಾಸ ಮುಂದುವರೆದಿದೆ,ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಗ್ರಾಮದ 60 ವರ್ಷ ಸಿದ್ದಮ್ಮ ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಸಿದ್ದಮ್ಮ ಮನೆ ಹೊರಗಿದ್ದ ಸೌದೆ ಎತ್ತಿಕೊಂಡು ಬರಲು ಮನೆಯಿಂದ ಹೊರಗೆ ಬಂದಿದ್ದಾರೆ ಈ ವೇಳೆ ಚಿರತೆ ಅವರ ಮೈಮೆಲೆ ಎರಗಿದೆ, ದಾಳಿ ಮಾಡಿ ಸಿದ್ದಮ್ಮನನ್ನ  ಎಳೆದುಕೊಂಡು ಹೊಗುವಾಗ ಗ್ರಾಮಸ್ಥರು ಕಿರುಚಾಡಿದ್ದಾರೆ,ಆ ವೇಳೆ ಸ್ಥಳದಲ್ಲಿಯೇ ಮಹಿಳೆಯ ದೇಹ ಬಿಟ್ಟು ಚಿರತೆ ಕಾಲ್ಕಿತ್ತಿದೆ.
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಘಟನೆ ನಡೆದು ಗಂಟೆಗಳು ಕಳೆದರು ಅಧಿಕಾರಿಗಳು ಒಬ್ಬರು ಸ್ಥಳಕ್ಕೆ ಆಗಮಿಸಿಲ್ಲವೆಂದು ಆಕ್ರೂಶ ಗೊಂಡಿದ್ದಾರೆ. ಮೃತ ದೇಹವನ್ನ ತಿ.ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ  ರವಾನೆ ಮಾಡುವ ಸಾಧ್ಯತೆ ಇದೆ.

Share Post