CrimeNational

ಡ್ರಾಪ್ ನೀಡುವ ನೆಪದಲ್ಲಿ ಅಂಗನವಾಡಿ ಶಿಕ್ಷಕಿ ಮೇಲೆ ಅತ್ಯಾಚಾರ, ಕೊಲೆ!

ಹೈದರಾಬಾದ್; ಬಸ್ಸಿಗಾಗಿ ಕಾಯುತ್ತಿದ್ದ ಅಂಗನವಾಡಿ ಶಿಕ್ಷಕಿಗೆ ಡ್ರಾಪ್ ನೀಡುತ್ತೇನೆ ಎಂದು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.. ತೆಲಙಗಾಣದದ ತಡ್ವಾಯಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

  ಕಾಟಾಪುರದ ಅಂಗನವಾಡಿ ಶಿಕ್ಷಕಿ ಕೆಲಸ ಮುಗಿಸಿ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು.. ಈ ವೇಳೆ ಬೈಕ್ ನಲ್ಲಿ ಬಂದ ರಾಮಯ್ಯ ಎಂಬಾತ ಡ್ರಾಪ್ ನೀಡುತ್ತೇನೆ ಎಂದು ಕೂರಿಸಿಕೊಂಡಿದ್ದಾನೆ.. ದಾರಿ ಮಧ್ಯೆ ಜಂಪಯ್ಯ ಎಂಬಾತ ಜೊತೆಯಾಗಿದ್ದು, ಇಬ್ಬರೂ ಸೇರಿ ಅತ್ಯಾಚಾರ ಎಸಗಿದ್ದಾರೆ.. ನಂತರ ಶಿಕ್ಷಕಿಯನ್ನು ಕೊಲೆ ಮಾಡಲಾಗಿದೆ.

  ಎರಡು ದಿನಗಳ ಹಿಂದೆ ಮುಳಗುವಿಯಲ್ಲಿ ಅಂಗನವಾಡಿ ಶಿಕ್ಷಕಿಯ ಭೀಕರ ಹತ್ಯೆಯಾಗಿತ್ತು. ತನಿಖೆಗೆ ಮಾಡಿದ ತೆಲಂಗಾಣ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದಾರೆ..

  ಏತೂರುನಗರ ಮಂಡಲದ ಚಿನ್ನಬೋಯಿನಪಲ್ಲಿ ಗ್ರಾಮದ ರಾದಂ ಸುಜಾತಾ ಎಂಬ ಶಿಕ್ಷಕಿಯೇ ಕೊಲೆಯಾದವರು.. ಘಟನೆ ಸಂಬಂಧ ಇಬ್ಬರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ..

 

Share Post