DistrictsPolitics

ಶೆಟ್ಟರ್‌, ಸವದಿ ಸೋಲಿಸುವ ಪಣ ತೊಟ್ಟ ಬಿಎಸ್‌ವೈ

ಚಿಕ್ಕೋಡಿ; ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿಯವರು ಎಲ್ಲಾ ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋಗಿದ್ದಾರೆ. ಬೆನ್ನಿಗೆ ಚೂರಿ ಹಾಕಿದ ಅವರಿಬ್ಬರನ್ನೂ ಸೋಲಿಸುವ ಹೊಣೆ ನನ್ನದು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಚಿಕ್ಕೋಡಿಯ ಶಿವಯೋಗಿ ದೇವಸ್ಥಾನದ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

ಜಗದೀಶ್‌ ಶೆಟ್ಟರ್‌ ಅವರು ಸಿಎಂ ಸ್ಥಾನದವರೆಗೆ ಎಲ್ಲಾ ಹುದ್ದೆಗಳನ್ನೂ ಅನುಭವಿಸಿದ್ದಾರೆ. ಈಗ ಅವರು ಪಕ್ಷ ತೊರೆದು ಹೋಗಿದ್ದಾರೆ. ಇನ್ನು ಲಕ್ಷ್ಮಣ ಸವದಿಯವರ ಪರಿಷತ್‌ ಸದಸ್ಯತ್ವ ಅವಧಿ ಇನ್ನೂ 5 ವರ್ಷ 2 ತಿಂಗಳಿತ್ತು. ಆದ್ರೆ ಅದಕ್ಕೆ ರಾಜೀನಾಮೆ ನೀಡಿಹೋಗಿದ್ದಾರೆ. ಈ ಮೂಲಕ ಇಬ್ಬರೂ ಬೆನ್ನಿಗೆ ಚೂರಿ ಹಾಕಿದ್ದಾರೆ. ಹೀಗಾಗಿ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಸವದಿಯವರನ್ನು ಸೋಲಿಸುವ ಹೊಣೆ ನಿಮ್ಮದು ಎಂದು ಸೇರಿದ್ದ ಜನತೆಗೆ ಹೇಳಿದರು.

ಈ ಬಾರಿ ಬಿಜೆಪಿ ಕನಿಷ್ಠ 130 ಸ್ಥಾನಗಳೊಂದಿಗೆ ಅಧಿಕಾರ ಹಿಡಿಯಲಿದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ಸವದಿ ಅವರು ಸೋಲುವುದು ಕೂಡಾ ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಯಡಿಯೂರಪ್ಪ ಇದೇ ವೇಳೆ ಹೇಳಿದರು.

Share Post