Districts

ಕಾವೇರಿ ವಿವಾದ; ಶನಿವಾರ ಮಂಡ್ಯ ನಗರ ಬಂದ್‌ಗೆ ಕರೆ

ಮಂಡ್ಯ; ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದ್ರೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮಂಡ್ಯದ ರೈತರು ಶನಿವಾರ ಮಂಡ್ಯ ಬಂದ್‌ಗೆ ಕರೆ ನೀಡಿದ್ದಾರೆ.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಈ ಕರೆ ನೀಡಲಾಗಿದೆ. ನಾಳೆ ಸಭೆ ಸೇರಲಿರುವ ರೈತ ಮುಖಂಡರು ಬಂದ್‌ನ ರೂಪುರೇಷೆಯನ್ನು ಸಿದ್ದಪಡಿಸಲಿದ್ದಾರೆ. ಅಂದು ಮಂಡ್ಯ ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ತೀರ್ಮಾನಿಸಲಾಗಿದೆ.

Share Post