DistrictsPolitics

ತ್ರೇತಾಯುಗದಿಂದಲೂ ಉತ್ತರಪ್ರದೇಶ ಹಾಗೂ ಮಂಡ್ಯಕ್ಕೂ ಸಂಬಂಧ; ಯೋಗಿ ಆದಿತ್ಯನಾಥ್‌

ಮಂಡ್ಯ; ಯೋಗಿ ಆದಿತ್ಯನಾಥ್‌ ಅವರು ಮಂಡ್ಯದಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮಂಡ್ಯದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ನಲ್ಲಿ ನಡೆಸ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ಆದಿ ಚುಂಚನಗಿರಿಗೆ ನನ್ನ ನಮಸ್ಕಾರಗಳು ಎಂದು ಶುರು ಮಾಡಿದ ಯೋಗಿಯವರು, ತ್ರೇತಾಯುಗದಿಂದಲೂ ಮಂಡ್ಯ ಹಾಗೂ ಉತ್ತರ ಪ್ರದೇಶಕ್ಕೆ ಸಂಬಂಧ ಇದೆ ಎಂದು ಹೇಳಿದರು.

ಶ್ರೀರಾಮ ಹಾಗೂ ಆಂಜನೇಯ ಈ ಭಾಗದಲ್ಲಿ ಓಡಾಡಿದ ಕುರುಹುಗಳಿವೆ. ಈ ಕಾರಣಕ್ಕಾಗಿ ನಮ್ಮ ರಾಜ್ಯಕ್ಕೂ ಮಂಡ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಮಂಡ್ಯಕ್ಕೆ ನಾನು ಬಂದಿರೋದು ಖುಷಿಯಾಗುತ್ತಿದೆ. ನೀವು ಬಿಜೆಪಿಯನ್ನು ಬೆಂಬಲಿಸಬೇಕು. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಯೋಗಿ ಆದಿತ್ಯನಾಥ್‌ ಮನವಿ ಮಾಡಿದರು.

Share Post