CrimeDistricts

ಮೀನು ಹಿಡಿಯಲು ಹೋದ ಯುವಕ ಶವವಾಗಿ ಪತ್ತೆ- ನೀರಿನಲ್ಲಿ ಮುಳುಗಿ ಸಾವು

ಕಲಬುರಗಿ: ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿ ಯುವಕ ಶವವಾದ ಘಟನೆ ಶಹಾಬಾದ ಸಮೀಪದ ಕಾಗಿಣಾ ನದಿಯಲ್ಲಿ ನಡೆದಿದೆ. ಶಶಿಕಾಂತ ರಾಠೋಡ್ ಮೃತ ಯುವಕ ಎಂದು ಗುರುತಿಸಲಾಗಿದೆ. ಮೃತ ಶಶಿಕಾಂತ ತನ್ನ ಮೂವರು ಗೆಳೆಯರೊಂದಿಗೆ‌ ಕಾಗಿಣಾ ನದಿಯ ಬ್ರಿಡ್ಜ್ ಕಮ್ ಬ್ಯಾರಿಜ್ ಬಳಿ ಮೀನು ಹಿಡಿಯಲು ‌ಹೋಗಿದ್ದ ಎನ್ನಲಾಗಿದೆ. ಈ ವೇಳೆ ಈಜಲು ನೀರಿಗೆ ಹಾರಿದಾಗ ದುರ್ಘಟನೆ ನಡೆದಿದೆ.

ಅಗ್ನಿಶಾಮಕ ದಳ‌ ಸಿಬ್ಬಂದಿಯ ತೀವ್ರ ಶೋಧ ಕಾರ್ಯದ ಬಳಿಕ ಶವ ಪತ್ತೆಯಾಗಿದೆ. ಈ ಕುರಿತು ಶಾಹಾಬಾದ್ ಪೋಲಿಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಶಹಬಾದ ಕಾಗಿನಾ ಬ್ರಿಡ್ಜ ಹತ್ತಿರದ ರೈಲ್ವೆ ಹಳಿಗೆ ತೆಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂದಾಜು 22 ವರ್ಷದ ಯುವಕ ಗೋಧಿಬಣ್ಣ ಹೊಂದಿದ್ದಾನೆ‌. ಮೃತ ಯುವಕನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡ್ತಿದಾರೆ.  ವಾಡಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Share Post