CrimeDistricts

ಮೋದಿಕೇರ್ ವ್ಯವಹಾರದಲ್ಲಿ ತೊಡಗಿದ್ದ 8 ಮಂದಿ ಶಿಕ್ಷಕರ ಅಮಾನತು

ಚಿತ್ರದುರ್ಗ: ಶಿಕ್ಷಕರ ವೃತ್ತಿ ಜೋತೆಗೆ ಮೋದಿಕೇರ್ ಎಂಬ ಖಾಸಗಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಎಂಟು ಜನ ಶಿಕ್ಷಕರನ್ನ ಅಮಾನತು ಮಾಡಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡ ಶಾಲೆಯ 8 ಮಂದಿ ಶಿಕ್ಷಕರನ್ನ ಅಮಾನತು ಮಾಡಿ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ ಮಾಡಿದ್ದಾರೆ‌. ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಸಿದ್ದಮ್ಮ, ಇಂದ್ರಾಣಿ, ಮಂಜುಳಾ ಸೇರಿ ಎಂಟು ಮಂದಿಯನ್ನ ಅಮಾನತು ಮಾಡಲಾಗಿದೆ.

ಈ ಕುರಿತು ಮಲ್ಲಿಕಾರ್ಜುನ್ ಎಂಬುವವರು ಶಿಕ್ಷಕರ ವಿರುದ್ದ ದೂರು‌ ನೀಡಿದ್ದರು.ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆ ಮೆರೆಗೆ ಅಮಾನತು ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನ ಶಿಕ್ಷಕರನ್ನ ವಿಚಾರಣೆಗೆ ಒಳಪಡಿಸಲಾಗಿದೆ‌. ಶಿಕ್ಷಕರ ಚೈನ್ ಲಿಂಕ್ ಮೂಲಕ ಮೋದಿ ಕೇರ್ ವ್ಯವಹಾರ ನಡೆಸಿರುವುದು ವಿಚಾರಣೆ ವೇಳೆ ಸಾಭಿತಾಗಿದೆ. ಶಿಕ್ಷಕರು ಯಾವುದೇ ಖಾಸಗಿ ವ್ಯವಹಾರ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಯಮ ವಿದ್ದರೂ ಶಿಕ್ಷಕರು‌ ನಿಯಮ ಉಲ್ಲಂಘನೆ ಮಾಡಿದ್ದಾರೆ.

Share Post