Districts

ಹಿಜಾಬ್ -ಕೇಸರಿ ನಡುವೆ ಕಲಬುರಗಿಯಲ್ಲಿ ಬಿಂದಿ ಚಳುವಳಿ ಅಭಿಯಾನ

ಕಲಬುರಗಿ: ಹಿಜಾಬ್- ಕೇಸರಿ ವಿವಾದದ ಜೊತೆಗೆ ಇದೀಗ ಬಿಂದಿ ಚರ್ಚೆ ಮುನ್ನೆಲೆಗೆ ಬಂದಿದೆ‌. ಹಿಜಾಬ್ ವಿರೋಧಿಸಿ ಕಲಬುರಗಿ ಹಿಂದುಪರ ಸಂಘಟನೆಯ ಮಹಿಳಾ ಮುಖಂಡರು ಸಿಂಧೂರ ಚಳುವಳಿ ಅಭಿಯಾನವನ್ನು ಆರಂಭಿಸಿದ್ದಾರೆ.

ಬಿಜೆಪಿ ಮುಖಂಡೆ, ಹಿಂದೂಪರ ಸಂಘಟನೆ ಕಾರ್ತಕರ್ತೆ ದಿವ್ಯಾ ಹಾಗರಗಿ ಅವರ ನೇತೃತ್ವದಲ್ಲಿ ಸಿಂಧೂರ ಚಳುವಳಿ ಆರಂಭಿಸಲಾಗಿದೆ. ಬಿಂದಿ ಹಾಕೊಂಡು ಶಾಲೆಗೆ ಬರ್ತಿರಲ್ಲಾ ಅನ್ನೋ ಮುಸ್ಲಿಂ ವಿದ್ಯಾರ್ಥಿನಿಗಳ ಪ್ರಶ್ನೆಗೆ ಆಕ್ರೋಶಗೊಂಡ ಹಿಂದೂ ಮಹಿಳೆಯರು, ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಅರಿಶಿಣ- ಕುಂಕುಮ ಹಚ್ಚಿ, ಬಳೆ ಕೊಟ್ಟು ವಿನೂತನವಾಗಿ ಸಿಂಧೂರ ಚಳುವಳಿಯನ್ನು ಆರಂಭಿಸಿದ್ದಾರೆ.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡೆ, ಹಿಂದುಪರ ಸಂಘಟನೆ ಕಾರ್ಯಕರ್ತೆ ದಿವ್ಯಾ ಹಾಗರಗಿ, ಕುಂಕುಮ ತಂಟೆಗೆ ಬಂದ್ರೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವಾ ಆಗಬೇಕಾಗುತ್ತೆ. ಅರಿಶಿಣ, ಕುಂಕುಮ, ಹೂವು, ಬಳೆ, ಮಹಿಳೆಯರು ಮುಡಿಯೋದು ನಮ್ಮ ಹಿಂದು ಸಂಪ್ರದಾಯ. ಹೀಗಾಗಿ ಸಿಂಧೂರ ಚಳುವಳಿ ಆರಂಭ ಮಾಡಿದ್ದೇವೆ. ಭಾರತ ಹಿಂದು ರಾಷ್ಟ್ರ, ಅರಿಶಿಣ, ಕುಂಕುಮ, ಕೇಸರಿ ಶಾಲು ನಮ್ಮ ಹಿಂದು ಸಂಪ್ರದಾಯ. ಹಿಜಾಬ್ ವಿಷಯ ಕೋರ್ಟ್ ನಲ್ಲಿದೆ ಅದರ ಬಗ್ಗೆ ಮಾತಾಡೋದಿಲ್ಲ. ಆದರೆ, ಕುಂಕುಮ ತಂಟೆಗೆ ಬಂದ್ರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Share Post