CrimeDistricts

ಒಂದೇ ಹುದ್ದೆಗೆ ಇಬ್ಬರು ಆಯುಕ್ತರ ನೇಮಕ; ಕುರ್ಚಿಗಾಗಿ ಇಬ್ಬರಿಂದ ಕಾದಾಟ

ಬಾಗಲಕೋಟೆ; ಬಾಗಲಕೋಟೆ ನಗರಸಭೆಗೆ ಇಬ್ಬರು ಆಯುಕ್ತರು ನೇಮಕವಾಗಿದ್ದು, ಕುರ್ಚಿಗಾಗಿ ಇಬ್ಬರ ನಡುವೆ ಕಾದಾಟ ನಡೆದಿದೆ. ಅಂದಹಾಗೆ ವಾಸಣ್ಣ ಆರ್‌. ಎಂಬುವವರು ಈ ಹಿಂದೆ ಇಲ್ಲಿನ ನಗರಸಭೆಯ ಆಯುಕ್ತರಾಗಿದ್ದರು. ಅವರನ್ನು ವರ್ಗಾವಣೆ ಮಾಡಿ ಈ ಜಾಗಕ್ಕೆ ರಮೇಶ್‌ ಜಾಧವ್‌ ಎಂಬುವವರನ್ನು ನೇಮಿಸಲಾಗಿತ್ತು. ಆದ್ರೆ ವಾಸಣ್ಣ ಅವರು ಕೆಇಟಿ ಮೆಟ್ಟಿಲೇರಿ ತಮ್ಮ ಪರವಾಗಿ ಆದೇಶ ತಂದಿದ್ದಾರೆ. ಹೀಗಾಗಿ ಇಬ್ಬರ ನಡುವೆ ಕುರ್ಚಿಗಾಗಿ ಕಿತ್ತಾಟ ನಡೆದಿದೆ.

ವಾಸಣ್ಣ ಅವರು ನಾನು ಕೆಇಟಿ ಆದೇಶ ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದ್ರೆ ರಮೇಶ್‌ ಅವರು ಸರ್ಕಾರಿ ಆದೇಶ ತರಲಿ, ಆಗ ಸೀಟು ಬಿಟ್ಟುಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇಬ್ಬರೂ ಅಧಿಕಾರಿಗಳು ಒಂದೇ ಕೊಠಡಿಯಲ್ಲಿ ಸೀಟಿಗಾಗಿ ಕಿತ್ತಾಟ ನಡೆಸಿದ್ದಾರೆ. ಇದರಿಂದಾಗಿ ಕಚೇರಿಯ ಸಿಬ್ಬಂದಿ ಗೊಂದಲ ಉಂಟಾಗಿದೆ.

 

Share Post