CrimeDistricts

ವೃದ್ದೆಗೆ ಮದುವೆ ಆಸೆ ತೋರಿಸಿದ ವೃದ್ಧ; ನಂಬಿದಾಕೆಗೆ ಬಿತ್ತು ಪಂಗನಾಮ!

ಹಾವೇರಿ; ವೃದ್ಧನೊಬ್ಬ ವಧು ಬೇಕಾಗಿದ್ದಾಳೆ ಎಂದು ಜಾಹೀರಾತು ಕೊಟ್ಟಿದ್ದಳು. ಇದನ್ನು ನೋಡಿ ವೃದ್ಧೆಯೊಬ್ಬಳು ಕರೆ ಮಾಡಿದ್ದಳು. ಅದನ್ನೇ ಬಂಡವಾಳ ಮಾಡಿಕೊಂಡ ವೃದ್ಧನೊಬ್ಬ ಆಕೆಯನ್ನು ಯಾಮಾರಿಸಿ ನಗ-ನಾಣ್ಯ ದೋಚಿದ್ದಾನೆ. ಹಾವೇರಿಯಲ್ಲಿ ಎಂಟು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

55 ವರ್ಷ ನಿರ್ಮಲಾ ಮಾಗೋಡಿ ಎಂಬುವವರೇ ಮೋಸ ಹೋದ ವೃದ್ಧೆ.  60 ವರ್ಷದ ವೃದ್ಧ ಸಂತೋಷ್‌ ಎಂಬಾತ ವಧು ಬೇಕಾಗಿದ್ದಾಳೆ ಎಂದು ಜಾಹೀರಾತು ಕೊಟ್ಟಿದ್ದ. ಅಲ್ಲಿದ್ದ ಫೋನ್‌ ನಂಬರ್‌ ಮೂಲಕ ವೃದ್ಧೆ ಸಂತೋಷ್‌ನನ್ನು ಸಂಪರ್ಕಿಸಿದ್ದಾಳೆ. ಅನಂತರ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಇಬ್ಬರೂ ಒಪ್ಪಿ ಮದುವೆಗೆ ತಯಾರಿ ನಡೆಸಿದ್ದಾರೆ. ಈ ನಡುವೆ ವೃದ್ಧ ಸಂತೋಷ್‌, ವೃದ್ಧೆ ನಿರ್ಮಲಾರನ್ನು ಹಾವೇರಿಯ ಹುಕ್ಕೇರಿ ಮಠಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಗೆ ಜ್ಯೂಸ್‌ನಲ್ಲಿ ಮತ್ತು ಬರೋ ಮಾತ್ರೆ ಕೊಟ್ಟು, ಆಕೆಯ ಬಳಿ ಇದ್ದ 7 ತೊಲೆ ಬಂಗಾರ ಹಾಗೂ 50 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post