DistrictsLifestyle

ದರ್ಶನ್‌ನ ಮದುವೆಯಾಗ್ತೀನಿ ಅಂತ ಜೈಲಿಗೆ ಬಂದ ಮಹಿಳಾ ಅಭಿಮಾನಿ!

ಬಳ್ಳಾರಿ(Bellary); ಒಂದು ಕಡೆ ನಟ ದರ್ಶನ್‌ ಸಂಕಷ್ಟದಲ್ಲಿದ್ದಾರೆ.. ಚಾರ್ಜ್‌ಶೀಟ್‌ ಸಲ್ಲಿಸಿರುವುದರಿಂದ ಮುಂದೇನಾಗುತ್ತೋ ಎಂಬ ಭೀತಿಯಲ್ಲಿ ದರ್ಶನ್‌ ಇದ್ದಾರೆ.. ಹೀಗಿರುವಾಗಲೇ ಅವರ ಮಹಿಳಾ ಅಭಿಮಾನಿಯೊಬ್ಬರು ಬಳ್ಳಾರಿ ಜೈಲಿನ ಬಳಿ ರಂಪಾಟ ಶುರು ಮಾಡಿದ್ದಾಳೆ.. ನಾನು ದರ್ಶನ್‌ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿ ಮಹಿಳೆ ಡ್ರಾಮಾ ಮಾಡಿದ್ದಾಳೆ.. ಜೈಲು ಸಿಬ್ಬಂದಿ ಆಕೆಯನ್ನು ನಿಯಂತ್ರಣ ಮಾಡಲಾಗದೇ ಪರದಾಡಿದ್ದಾರೆ..

ಇದನ್ನೂ ಓದಿ; ಕುಡುಮಾ ಎಂಬ ಊರಿಗೆ ಧರ್ಮಸ್ಥಳ ಎಂದು ಹೆಸರು ಬಂದಿದ್ದು ಹೇಗೆ..?

ದರ್ಶನ್‌ ಅವರನ್ನು ಇತ್ತೀಚೆಗೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಎಂಬ ಮಧ್ಯವಯಸ್ಕ ಮಹಿಳೆ ಯೊಬ್ಬರು ಬಳ್ಳಾರಿ ಸೆಂಟ್ರಲ್‌ ಜೈಲಿನ ಬಳಿ ಹಣ್ಣು ಹಂಪಲು, ಆಧಾರ್‌ ಕಾರ್ಡ್‌ ಹಿಡಿದುಬಂದಿದ್ದಾಳೆ.. ಆದ್ರೆ ಜೈಲು ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿಲ್ಲ.. ಆಗ ಆಕೆ ರಾದ್ಧಾಂತ ಮಾಡಿದ್ದಾಳೆ.. ನಾನು ದರ್ಶನ್‌ ಅಭಿಮಾನಿ. ದರ್ಶನ್‌ ಅಂದ್ರೆ ನನಗೆ ಇಷ್ಟ.. ನಾನು ಅವರನ್ನು ಮದುವೆಯಾಗುತ್ತೇನೆ ಎಂದು ಆಕೆ ಹಠ ಹಿಡಿದಿದ್ದಾಳೆ.. ನಾನು ಬೆಂಗಳೂರಿನ ಜೈಲಿನ ಬಳಿಯೂ ಹೋಗಿದ್ದೆ.. ಅಲ್ಲಿಯೂ ಒಳಗೆ ಬಿಟ್ಟಿಲ್ಲ.. ಇಲ್ಲಾದರೂ ಬಿಡಿ ಎಂದು ಅಂಗಲಾಚಿದ್ದಾಳೆ..

ಇದನ್ನೂ ಓದಿ; ಬೆಚ್ಚಿಗಿನ ನೀರಿನಲ್ಲಿ ತುಪ್ಪ ಬೆರೆಸಿ ಕುಡಿದರೆ ರೋಗಗಳು ಮಾಯ!

ನಾನು ದರ್ಶನ್‌ ಅವರನ್ನು ನೋಡಿ ಬರಬೇಕು.. ಹಣ್ಣು ಕೊಡಬೇಕು.. ಅವರು ಚಿಕನ್‌ ಬೇಕು ಅಂದ್ರೆ ಮಾಡಿಕೊಂಡು ಬರುತ್ತೇನೆ ಎಂದು ಅಭಿಮಾನಿ ಲಕ್ಷ್ಮೀ ಪಟ್ಟು ಹಿಡಿದ್ದಾಳೆ.. ಈ ವೇಳೆ ಜೈಲು ಸಿಬ್ಬಂದಿ ಜೊತೆಗೆ ಲಕ್ಷ್ಮೀ ವಾಗ್ವಾದವನ್ನೂ ಮಾಡಿದ್ದಾಳೆ.. ದರ್ಶನ್‌ ಭೇಟಿಗೆ ಅವಕಾಶ ಇರೋದು ಸಂಬಂಧಿಗಳಿಗೆ ಮಾತ್ರ ಎಂದು ಸಿಬ್ಬಂದಿ ಹೇಳಿದಾಗ, ನಾನು ದರ್ಶನ್‌ರನ್ನು ಮದುವೆಯಾಗೋದಕ್ಕೆ ಬಂದಿದ್ದೇನೆ.. ನನ್ನನ್ನು ಒಳಗೆ ಬಿಡಿ ಎಂದು ಹೇಳಿದ್ದಾಳೆ..

Share Post