CrimeNational

ಸಿಗರೇಟ್‌ ಕೊಡಲಿಲ್ಲ ಅಂತ ಇಬ್ಬರು ಯುವಕರ ಕೊಲೆ..!

ನವದೆಹಲಿ; ಸೇದೋದಕ್ಕೆ ಸಿಗರೇಟ್‌ ಕೊಟ್ಟಿಲ್ಲ ಅಂತ ಇಬ್ಬರು ಯುವಕರನ್ನು ಹತ್ಯೆ  ಮಾಡಿರುವ ಘಟನೆ ನಡೆದಿದೆ.. ಕಳೆದ ತಡರಾತ್ರಿ ನವದೆಹಲಿಯ ಭಾಲ್ಸವಾ ಡೈರಿ ಬಳಿ ಈ ಕೃತ್ಯ ಎಸಗಲಾಗಿದೆ.. ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ..

ಇದನ್ನೂ ಓದಿ; ಟೈರ್‌ ಬ್ಲಾಸ್ಟ್‌ ಆಗಿ ಕಾರು ಪಲ್ಟಿ; ಇಬ್ಬರ ದುರ್ಮರಣ, 7 ಮಂದಿಗೆ ಗಾಯ!

ಭಾಲ್ಸವಾ ಡೈರಿ ನಿವಾಸಿಗಳಾದ ಸಮೀರ್ ಮತ್ತು ಫರ್ದೀನ್ ಎಂಬುವವರೇ ಕೊಲೆಯಾದ ಯುವಕರು ಎಂದು ಗುರುತಿಸಲಾಗಿದೆ.. 19 ವರ್ಷದ ಅಬ್ದುಲ್ ಸಮ್ಮಿ, 20 ವರ್ಷದ ವಿಕಾಸ್ ಹಾಗೂ ಅರ್ಶ್ಲಾನ್ ಎಂಬುವವರೇ ಈ ಕೃತ್ಯ ಎಸಗಿರುವವರು.. ಇವರನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ..

ಇದನ್ನೂ ಓದಿ; ರಾಮೇಶ್ವರಂ ಕೆಫೆಗಿಂತ ದೊಡ್ಡ ಬಾಂಬ್‌; ವಿಮಾನ ನಿಲ್ದಾಣದ ಸ್ಫೋಟದ ಬೆದರಿಕೆ

ಕೊಲೆಯಾದ ಫರ್ದೀನ್‌ ಹಾಗೂ ಸಮೀರ್‌ ಅವರು ಸಂಬಂಧಿಯೊಬ್ಬರ ಮದುವೆ ಆರತಕ್ಷತೆಗೆಂದು ಅಲ್ಲಿಗೆ ಬಂದಿದ್ದರು.. ಇದೇ ವೇಳೆ ಸಿಗರೇಟ್‌ ಸೇದಲೆಂದು ರಾತ್ರಿ ಅಂಗಡಿಯೊಂದರ ಬಳಿ ಬಂದಿದ್ದರು.. ಇಬ್ಬರೂ ಅಂಗಡಿ ಬಳಿ ಸಿಗರೇಟ್‌ ಸೇದುತ್ತಿದ್ದಾಗ, ಅಲ್ಲಿದ್ದ ಮೂವರು ಸಿಗರೇಟ್‌ ಕೊಡುವಂತೆ ಕೇಳಿದ್ದಾರೆ.. ಇದನ್ನು ಸಮೀರ್‌ ಹಾಗೂ ಫರ್ದೀನ್‌ ಕೊಡಲು ನಿರಾಕರಿಸಿದ್ದಾರೆ..

ಇದನ್ನೂ ಓದಿ; ತುಮಕೂರಿನಲ್ಲಿ ಬಿರಿಯಾನಿ ಹೋಟೆಲ್‌ಗೆ ಬೆಂಕಿ!; 25 ಲಕ್ಷ ರೂ. ನಷ್ಟ..!

ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆದಿದೆ.. ಮೂವರೂ ಸೇರಿ ಪರ್ದೀನ್‌ ಹಾಗೂ ಸಮೀರ್‌ ಮೇಲೆ ಹಲ್ಲೆ ಮಾಡಿದ್ದಾರೆ.. ನಂತರ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.. ಘಟನೆಯಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ..

ಇದನ್ನೂ ಓದಿ; ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮೊಬೈಲ್‌ ಬ್ಲಾಸ್ಟ್‌; ಮಹಿಳೆ ದಾರುಣ ಸಾವು!

 

Share Post