CrimeDistricts

ನದಿಗೆ ಹಾರಿದ ಪತ್ನಿ; ರಕ್ಷಿಸಲು ಹೋದ ಗಂಡ, ಸಂಬಂಧಿಕ ಸಾವು.. ಆಕೆ?

ಕಲಬುರಗಿ; ಕೌಟುಂಬಿಕ ಕಲಹದಿಂದಾಗಿ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ನೋಡಿದ ಮಹಿಳೆಯ ಗಂಡ ಹಾಗೂ ಸಂಬಂಧಿ ಆಕೆಯನ್ನು ರಕ್ಷಿಸಲು ನದಿಗೆ ಹಾರಿದ್ದಾರೆ.. ಈ ವೇಳೆ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಿದ್ದಾರೆ.. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದ ಮಹಿಳೆ ಮಾತ್ರ ಬದುಕಿ ಬಂದಿದ್ದಾಳೆ.. ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ದೇವಣಗಾಂವ ಬ್ರಿಡ್ಜ್‌ ಬಳಿಯ ಭೀಮಾ ನದಿಯಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಮದುವೆ ಮುರಿದುಬಿದ್ದಿದ್ದಕ್ಕೆ ಗಾಂಜಾ ಅಸ್ತ್ರ ಪ್ರಯೋಗಿಸಿದ ಎಂಜಿನಿಯರ್‌!

ಕಡಣಿ ಗ್ರಾಮದ ಲಕ್ಷ್ಮೀ ಎಂಬಾಕೆ ಗಂಡನ ಜೊತೆ ಜಗಳ ಮಾಡಿಕೊಂಡಿದ್ದಳು.. ಹೀಗಾಗಿ ಆಕೆ ಸಾಯುತ್ತೇನೆ ಎಂದು ಹೇಳಿ ನದಿಗೆ ಹಾರಿದ್ದಾಳೆ.. ಈ ವೇಳೆ ಆಕೆಯನ್ನು ರಕ್ಷಿಸಲು ಪತಿ ಶಿವಕುಮಾರ ಕಡಣಿ ಹಾಗೂ ಸಂಬಂಧಿ ರಾಜು ನದಿಗೆ ಹಾರಿದ್ದಾರೆ.. ಆದ್ರೆ ನದಿಯಲ್ಲಿ ನೀರು ಜೋರಾಗಿ ಹರಿಯುತ್ತಿದ್ದರಿಂದ ರಕ್ಷಿಸಲು ಹೋದ ಇಬ್ಬರೂ ನೀರುಪಾಲಾಗಿದ್ದಾರೆ.. ಇತ್ತ ಮೀನುಗಾರರು ಹಾಕಿದ ಬಲೆಗೆ ಸಿಲುಕಿದ ಮಹಿಳೆ ಸೇಫಾಗಿ ದಡ ಸೇರಿದ್ದಾರೆ..
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತೀವ್ರ ಶೋಧ ನಡೆಸಿದರು.. ಕೊನೆಗೆ ಇಬ್ಬರ ಮೃತದೇಹಗಳೂ ಪತ್ತೆಯಾಗಿವೆ.. ಈ ಬಗ್ಗೆ ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

ಇದನ್ನೂ ಓದಿ; ಮೂತ್ರ ಕುಡಿಸಿ, ಭೀಕರವಾಗಿ ಥಳಿಸಿ ಪ್ರಿಯಕರನ ಕೊಲೆ ಮಾಡಿದ ಯುವತಿ!

Share Post