CrimeNational

ವೃದ್ದೆಯ ದೇಹವನ್ನು ತುಂಡು ತುಂಡು ಮಾಡಿ ನದಿಗೆ ಎಸೆದ ದುರುಳರು!

ಚೆನ್ನೈ; ದಿನಗೂಲಿ ಮಾಡಿ ಬದುಕು ಸಾಗಿಸುವ ವೃದ್ಧೆಯನ್ನು ಕೊಂದ ದುರುಳರು, ಆಕೆಯ ದೇಹವನ್ನು ತುಂಡು ತುಂಡು ಕತ್ತರಿಸಿ ನದಿಗೆ ಎಸೆದಿರುವ ಘಟನೆ ಚೆನ್ನೈನ ಮೈಲಾಪುರದ ಎಂಜಿಆರ್‌ ನಗರದಲ್ಲಿ ಈ ಘಟನೆ ನಡೆದಿದೆ.. ವಿಜಯಾ ಎಂಬ ವೃದ್ಧ ಮಹಿಳೆ ಕೊಲೆಯಾಗಿದ್ದು, ಆಕೆಯ ದೇಹವನ್ನು ತುಂಡು ಮಾಡಿ ಆಡ್ಯಾರ್‌ ನದಿಗೆ ಎಸೆಯಲಾಗಿದೆ.. ಈ ಸಂಬಂಧ ಪಕ್ಕದ ಮನೆಗೆ ದಂಪತಿಯನ್ನು ಪೊಲೀಸರು ವಿರುದ್‌ನಗರದಲ್ಲಿ ಬಂಧಿಸಿದ್ದಾರೆ..

ಇದನ್ನೂ ಓದಿ; ಮಲಗಿದ್ದ ಮಹಿಳೆಯ ಕೂದಲಲ್ಲಿ ಹರಿದಾಡಿದ ಹಾವು!

ವಿಜಯಾ ಎಂಬ ವೃದ್ಧೆ ಎಂಜಿಆರ್‌ ನಗರದಲ್ಲಿ ತನ್ನ ಮಗಳು ಲೋಕನಾಯಕಿ ಜೊತೆ ವಾಸವಿದ್ದಳು.. ಜುಲೈ 17ರಂದು ದಿನಗೂಲಿ ಕೆಲಸಕ್ಕೆ ಹೋಗಿದ್ದ ವಿಜಯಾ ಅವರು ಮನೆಗೆ ವಾಪಸ್‌ ಬಂದಿರಲಿಲ್ಲ.. ಇದರಿಂದ ಮಗಳ ಲೋಕನಾಯಕಿ ಆತಂಕಗೊಂಡಿದ್ದಳು.. ಎರಡು ದಿನವಾದರೂ ವಿಜಯಾ ಅವರು ಮನೆಗೆ ಬಾರದಿದ್ದಾಗ ಅನುಮಾನಗೊಂಡು ಜುಲೈ 19ರಂದು ಎಂಜಿಆರ್‌ ನಗರ ಪೊಲೀಸರಿಗೆ ದೂರು ನೀಡಿದ್ದರು..

ಇದನ್ನೂ ಓದಿ; ತಿರುಪತಿ ಬೆಟ್ಟ ಹತ್ತುತ್ತಿದ್ದಾಗ ಭಕ್ತನಿಗೆ ಕಚ್ಚಿದ ಹಾವು!

ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದಾಗ ನೆರೆಹೊರೆಯವರಾದ ಪಾರ್ಥಿಬನ್‌ ಎಂಬಾತನ ಮೇಲೆ ಅನುಮಾನ ಬಂದಿದೆ.. ಕೂಡಲೇ ಆತನನ್ನು ವಿಚಾರಣೆಗೆ ಬರುವಂತೆ ಕರೆಯಲಾಗಿತ್ತು.. ಆದ್ರೆ ಪಾರ್ಥಿಬನ್‌ ಹಾಗೂ ಆತನ ಹೆಂಡತಿ ತಲೆಮರೆಸಿಕೊಂಡಿದ್ದರು.. ಕೊನೆಗೂ ಇಬ್ಬರೂ ವಿರುದ್‌ನಗರದಲ್ಲಿ ಸಿಕ್ಕಿಬಿದ್ದಿದ್ದಾರೆ.. ವಿಚಾರಣೆ ನಡೆಸಿದಾಗ ಕಳ್ಳತನ ಮಾಡುತ್ತಿದ್ದಾಗ ಅಜ್ಜಿ ಕೈಗೆ ಸಿಕ್ಕಿಬಿದ್ದೆವು. ಹೀಗಾಗಿ ಆಕೆಯನ್ನು ಕೊಲೆ ಮಾಡಿ, ತುಂಡು-ತುಂಡು ಮಾಡಿ ಆಡ್ಯಾರ್‌ ನದಿಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ.. ಇನ್ನೂ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ..

Share Post