BengaluruCrime

ಬೈಕ್‌ಗೆ ಗುದ್ದಿದ ಕಸದ ಲಾರಿ; ಹುಡುಗ-ಹುಡುಗಿ ದೇಹಗಳನ್ನು 10 ಮೀಟರ್‌ ಎಳೆದೊಯ್ದ ವಾಹನ!

ಬೆಂಗಳೂರು; ಕಳೆದ ರಾತ್ರಿ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ.. ವೇಗವಾಗಿ ಬಂದ ಕಸದ ಲಾರಿಯೊಂದು, ಬೈಕ್‌ಗೆ ಡಿಕ್ಕಿ ಹೊಡೆದಿದೆ.. ಬೈಕ್‌ ಮೇಲೆ ಸವಾರಿ ಮಾಡುತ್ತಿದ್ದ ಹುಡುಗ ಹಾಗೂ ಹುಡುಗಿಯನ್ನು ಹತ್ತು ಮೀಟರ್‌ವರೆಗೂ ಎಳೆದೊಯ್ದಿದೆ.. ಬೆಂಗಳೂರಿನ ಕೆಆರ್‌ ಸರ್ಕಲ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುವ ಪ್ರಶಾಂತ್‌ ಹಾಗೂ ಶಿಲ್ಪ ಎಂಬುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಕೇಂದ್ರ ಸಚಿವ ಕುಮಾರಸ್ವಾಮಿ ಮುಗಿನಿಂದ ರಕ್ತಸ್ರಾವ; ಕಾರಣ ಏನು?

ಶಿಲ್ಪ ಆಂಧ್ರ ಮೂಲದವರಾಗಿದ್ದು ಪಿಜಿಯಲ್ಲಿ ವಾಸವಿದ್ದಾರೆ.. ಬೆಂಗಳೂರು ಮೂಲದವರೇ ಆದ ಪ್ರಶಾಂತ್‌ ಕೂಡಾ ಶಿಲ್ಪ ಕೆಲಸ ಮಾಡುವ ಐಟಿಪಿಎಲ್‌ನ ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.. ಇಬ್ಬರೂ ಸ್ನೇಹಿತರಾಗಿದ್ದರಿಂದ ಊಟಕ್ಕೆಂದು ಹೊರಗೆ ಬಂದಿದ್ದರು.. ಇಬ್ಬರೂ ಬೈಕ್‌ನಲ್ಲಿ ಮೆಜೆಸ್ಟಿಕ್‌ನಿಂದ ಕೆಆರ್‌ ಸರ್ಕಲ್‌ ಕಡೆಗೆ ಬರುತ್ತಿದ್ದರು. ಇದೇ ವೇಳೆ ಸಿಐಡಿ ಸಿಗ್ನಲ್‌ ಮಾರ್ಗದಿಂದ ಕೆ.ಆರ್‌.ಸರ್ಕಲ್‌ ಕಡೆಗೆ ವೇಗವಾಗಿ ಬಂದ ಕಸದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿ ಕುಳಿತಿದ್ದ ಶಿಲ್ಪ ಹಾಗೂ ಪ್ರಶಾಂತ್‌ ದೇಹಗಳನ್ನು ಹತ್ತು ಮೀಟರ್‌ವರೆಗೂ ಎಳೆದೊಯ್ದಿದೆ..

ಇದನ್ನೂ ಓದಿ; ಮಲಗಿದ್ದ ಮಹಿಳೆಯ ಕೂದಲಲ್ಲಿ ಹರಿದಾಡಿದ ಹಾವು!

ಲಾರಿ ಎಳೆದೊಯ್ದಿದ್ದರಿಂದಾಗಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು.. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು.. ಆದ್ರೆ ಮಾರ್ಗಮಧ್ಯೆಯೇ ಇಬ್ಬರೂ ಸಾವನ್ನಪ್ಪಿದ್ದಾರೆ.. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

Share Post